Jun 122019
 

 

  1. ಶ್ರದ್ಧಾಂಜಲಿ 
 ಕನ್ನಡ ಸಾಹಿತ್ಯ ರಂಗದ ಶ್ರದ್ಧಾಂಜಲಿ

ಗಿರೀಶ್ ಕಾರ್ನಾಡರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕನ್ನಡ ಭಾಷೆಯ ಹಿರಿಮೆಯನ್ನು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ ಹಲವೇ ಪ್ರಖ್ಯಾತ ಲೇಖಕರಲ್ಲಿ ಒಬ್ಬರಾದ ಗಿರೀಶ ಕಾರ್ನಾಡರ ಸಾವಿನ ಸುದ್ದಿ ನಮ್ಮೆಲ್ಲರನ್ನೂ ದುಃಖತಪ್ತರನ್ನಾಗಿಸಿದೆ. ಆಧುನಿಕ ಭಾರತೀಯ ರಂಗಭೂಮಿಯನ್ನು ಎತ್ತರಕ್ಕೆ ಒಯ್ದ ಪ್ರತಿಭಾವಂತ ನಟ, ನಿರ್ದೇಶಕ ಮತ್ತು ಅಪ್ರತಿಮ ನಾಟಕಕಾರ ಕಾರ್ನಾಡ್. ನಾಟಕರಂಗದ ಜೊತೆಗೆ ಚಲನಚಿತ್ರ ಮತ್ತು ಕಿರುತೆರೆಯ ಮಾಧ್ಯಮದ ಮೇಲೆ ಸಹ ಕಾರ್ನಾಡ್ ತಮ್ಮದೇ ಆದ ಛಾಪುಗಳನ್ನು ಒತ್ತಿಹೋಗಿದ್ದಾರೆ. ಭಾರತೀಯ ಸಾರಸ್ವತಲೋಕದ ಹೆಮ್ಮೆಯ ಜ್ಞಾನಪೀಠ ಪುರಸ್ಕೃತರಾದ ಗಿರೀಶ ಕಾರ್ನಾಡರನ್ನು ನೆನೆಯುತ್ತ ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ.

ಅಮೆರಿಕದ ಕನ್ನಡ ಸಾಹಿತ್ಯ ರಂಗದ ಪರವಾಗಿ,

ನಾಗ ಐತಾಳ ಮತ್ತು ಮೈ. ಶ್ರೀ. ನಟರಾಜ
ಆಡಳಿತ ಮಂಡಲಿಯ ಮತ್ತು ಕಾರ್ಯಕಾರೀ ಸಮಿತಿಯ ಅಧ್ಯಕ್ಷರು.

 

 Posted by at 10:45 AM