Jan 292017
 

ಕನ್ನಡ ಸಾಹಿತ್ಯ ರಂಗದ ಪ್ರಮುಖ ಮೈಲಿಗಲ್ಲುಗಳು

೨೦೧೫: ಕನ್ನಡ ಸಾಹಿತ್ಯ ರಂಗದ ಏಳನೆಯ ವಸಂತ ಸಾಹಿತ್ಯೋತ್ಸವ: ಸೈಂಟ್ ಲೂಯಿಸ್ ನಗರದ ಸಂಗಮ ಕನ್ನಡ ಕೂಟದ ಆಶ್ರಯ ಮತ್ತು ಮಧ್ಯ-ಪಶ್ಚಿಮ ವಲಯದ ಹಲವು ಕನ್ನಡ ಸಂಘಗಳ ಸಹಕಾರದೊಂದಿಗೆ ಅನುವಾದ ಸಾಹಿತ್ಯವನ್ನು ಕುರಿತ ಕಾರ್ಯಕ್ರಮ ಮೇ ೩೦-೩೧ ರಂದು ವಿಜೃಂಭಣೆಯಿಂದ ನೆರವೇರಿತು. ಮೈಸೂರಿನಿಂದ ಖ್ಯಾತ ಅನುವಾದಕ ಪ್ರೊ. ಪ್ರಧಾನ್ ಗುರುದತ್ತರು ಪ್ರಧಾನ ಅತಿಥಿಗಳಾಗಿ ಆಗಮಿಸಿ “ಅನುವಾದದ ಆಗು-ಹೋಗುಗಳು” ಎಂಬ ವಿದ್ವತ್ಪೂರ್ಣ ಭಾಷಣವನ್ನು ಮಾಡಿದರು. ಪ್ರೊ. ಎಸ್. ಎನ್. ಶ್ರೀಧರ್ ಮತ್ತು ಪ್ರೊ. ನಾರಾಯಣ ಹೆಗ್ಡೆ ವಿಶೇಷ ಅತಿಥಿಗಳಾಗಿ ಬಂದು ಅನುವಾದ ಕಮ್ಮಟದಲ್ಲಿ ಭಾಗವಹಿಸಿದರು. “ಅನುವಾದ ಸಂವಾದ” ಎಂಬ ಕನ್ನಡ ಪುಸ್ತಕ (ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ, ಕಥೆ, ಕವನ, ಪ್ರಬಂಧ ಮತ್ತು ನಾಟಕಗಳ ಸಂಕಲನ) ಮತ್ತು “A Little Taste of Kannada in English” ಎಂಬ ಇಂಗ್ಲೀಷ್ ಪುಸ್ತಕ (ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ ಕಥೆ, ಕವನ ಮತ್ತು ಪ್ರಬಂಧಗಳ ಸಂಕಲನ) ಶ್ರೀಕಾಂತ ಬಾಬು ಅವರ ಸಂಪಾದಕತ್ವದಲ್ಲಿ ಲೋಕಾರ್ಪಣೆಗೊಂಡವು. ಆಂಗ್ಲ ಭಾಷೆಯಲ್ಲಿ ಪುಸ್ತಕವೊಂದನ್ನು ರಂಗ ಹೊರತರುತ್ತಿರುವುದು ಇದೇ ಮೊದಲು. ಈ ಪುಸ್ತಕಗಳು ಮೊದಲ ಬಾರಿಗೆ ಅಮೆಜಾನ್ ಮೂಲಕ ಲಭ್ಯವಾಗಿವೆ. ನಾಗ ಐತಾಳ ಮತ್ತು ಜ್ಯೋತಿ ಮಹಾದೇವ್ ಸಂಪಾದಿಸಿರುವ “ಅಮೆರಿಕನ್ನಡ ಬರಹಗಾರರ ಸಂಕ್ಷಿಪ್ತ ಮಾಹಿತಿ ಕೋಶ” ಎಂಬ ಉಪಯುಕ್ತ ಪುಸ್ತಕವು ಕೂಡ ಲೋಕಾರ್ಪಣೆಗೊಂಡಿದ್ದು ಏಳನೆಯ ವಸಂತ ಸಾಹಿತ್ಯೋತ್ಸವದ ಹಿರಿಮೆಗಳಲ್ಲೊಂದು.

೨೦೧೩: ಕನ್ನಡ ಸಾಹಿತ್ಯ ರಂಗ ಮೊದಲ ದಶಕವನ್ನು ತಲುಪಿದ ಸಂಭ್ರಮ, ಹ್ಯೂಸ್ಟನ್ ಕನ್ನಡವೃಂದದ ಸಹಯೋಗದಲ್ಲಿ ಮತ್ತು ಟೆಕ್ಸಸ್ ಪ್ರಾಂತ್ಯದ ಇತರ ಕನ್ನಡ ಸಂಘಗಳಾದ ಡಲ್ಲಾಸಿನ ಮಲ್ಲಿಗೆ ಕನ್ನಡ ಸಂಘ, ಸ್ಯಾನ್ ಆಂಟೋನಿಯಾದ ಕುವೆಂಪು ಕನ್ನಡ ಸಂಘ, ರಿಯೋ ಗ್ರ್ಯಾಂಡಿ ಕಣಿವೆಯ ಕನ್ನಡ ಸಂಘ ಮತ್ತು ಆಸ್ಟಿನ್ ಕನ್ನಡ ಸಂಘಗಳ ಸಹಕಾರದೊಂದಿಗೆ ರೈಸ್ ಯೂನಿವರ್ಸಿಟಿ ಪ್ರಾಂಗಣದಲ್ಲಿ ಆರನೇ ವಸಂತ ಸಾಹಿತ್ಯೋತ್ಸವ. ಪ್ರಖ್ಯಾತ ಕವಿ ಮತ್ತು ಬರಹಗಾರ ಪ್ರೊ|| ಕೆ.ವಿ ತಿರುಮಲೇಶ್ ಅವರು ಮುಖ್ಯ ಅತಿಥಿಗಳು, ಮುಖ್ಯ ಅತಿಥಿಗಳ ಭಾಷಣದ ವಿಷಯ “ಕನ್ನಡದ ಮುನ್ನಡೆ: ಸವಾಲುಗಳು ಮತ್ತು ಅವಕಾಶಗಳು.” ಸಮಾಜ ಶಾಸ್ತ್ರಜ್ಞ, ಪ್ರೊ. ಶ್ರೀಪತಿ ತಂತ್ರಿ, ಕನ್ನಡ ಭಾಷಾಶಾಸ್ತ್ರಜ್ಞ ಪ್ರೊ. ಎಸ್.ಎನ್. ಶ್ರೀಧರ್ ಮತ್ತು ಮೈಸೂರಿನ ಧ್ವನ್ಯಾಲೋಕದ ಪ್ರೊ. ಸಿ. ಎನ್. ಶ್ರೀನಾಥ್ ಇತರ ಆಹ್ವಾನಿತ ಅತಿಥಿಗಳು. ಹ್ಯೂಸ್ಟನ್ ಕನ್ನಡವೃಂದ ಯೋಜಿಸಿದ, ಜಗದ್ವಿಖ್ಯಾತ (ದಿವಂಗತ) ರಾಜಾರಾಯರ ಇನ್ನೂ ಕರಡಿನಲ್ಲಿದ್ದ ಆಂಗ್ಲ ಕಾದಂಬರಿಯ ಕನ್ನಡ ರೂಪಾಂತರ, ‘ನಾರೀಗೀತ’ದ ಲೋಕಾರ್ಪಣೆ ಮತ್ತು ಅದರ ವೈಶಿಷ್ಟ್ಯಗಳ ಚರ್ಚೆ. ಅಮೆರಿಕದಲ್ಲಿ ನೆನೆಸಿರುವ ಕನ್ನಡಿಗರ ಜೀವನ ಮತ್ತು ವೃತ್ತಿ ಅನುಭವಗಳನ್ನು ಸೆರೆಹಿಡಿಯುವ ಪ್ರಬಂಧಗಳನ್ನೊಳಗೊಂಡ ಅಮೂಲ್ಯ ಪುಸ್ತಕ “ಬೇರು-ಸೂರು, ಅಮೆರಿಕದಲ್ಲಿ ನಮ್ಮ ಬದುಕು” ಪ್ರಕಟಣೆ (ಸಂಪಾದಕರು: ಗುರುಪ್ರಸಾದ್ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್ ಮತ್ತು ಜ್ಯೋತಿ ಮಹಾದೇವ್).

೨೦೧೨: KSR-Book Club ಸ್ಥಾಪನೆ. ತಿ೦ಗಳಿಗೊಮ್ಮೆ ದೂರವಾಣಿಯ ಮೂಲಕ ನಡೆಯುವ ಈ ಕಿರು ಸಂಕಿರಣದಲ್ಲಿ ಯಾವುದಾದರೂ ಒ೦ದು ಉತ್ತಮವಾದ ಕತೆ ಅಥವ ಇತರ ಸಾಹಿತ್ಯ ರಚನೆಯನ್ನು ಕುರಿತು ಸದಸ್ಯರು ಚರ್ಚಿಸುತ್ತಾರೆ. ದೇಶದ ಒಳಗೆ ಮತ್ತು ಹೊರಗೆ ಇರುವ ಆಸಕ್ತ ಸದಸ್ಯರೆಲ್ಲ ಸೇರಿ ನಡೆಸುವ ಈ ಚರ್ಚೆ ಬಹಳ ವಿಚಾರಶೀಲವೂ ಉಪಯುಕ್ತವೂ ಆಗಿದೆ. ಪ್ರತಿ ತಿಂಗಳೂ ನಡೆಯುವ ರಂಗದ ಈ ಕಾರ್ಯಕ್ರಮದಲ್ಲಿ ಕೇಳುಗರಾಗಿ ಅಥವಾ ಪ್ರಸ್ತುತ ಪಡಿಸುವವರಾಗಿ ಮತ್ತು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರಾಗಿ ಭಾಗವಹಿಸಲು ಅವಕಾಶವಿದೆ. ಈ ಬಗ್ಗೆ ರಂಗದ ಪದಾಧಿಕಾರಿಗಳನ್ನು ಸಂಪರ್ಕಿಸಿ.

೨೦೧೧: ಐದನೇ ವಸ೦ತ ಸಾಹಿತ್ಯೋತ್ಸವ, ಏಪ್ರಿಲ್ ೩೦-ಮೇ ೧, ಕ್ಯಾಲಿಫ಼ೋರ್ನಿಯಾ ಕೊಲ್ಲಿ ಪ್ರದೇಶದ ವುಡ್ಸೈಡ್ ಎಂಬ ಊರಿನಲ್ಲಿ; ಸಹಯೋಗ: ಕ್ಯಾಲಿಫ಼ೊರ್ನಿಯಾ ಕನ್ನಡ ಕೂಟ; ಸಹಕಾರ: ಸಾಹಿತ್ಯ ಗೋಷ್ಠಿ; ಮುಖ್ಯ ವಸ್ತು: ಕನ್ನಡ ಪ್ರಬಂಧ; ಮುಖ್ಯ ಅತಿಥಿ: ಡಾ. ಸುಮತೀ೦ದ್ರ ನಾಡಿಗ; ಪ್ರಮುಖ ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯದಲ್ಲಿ ಪ್ರಬ೦ಧ ಪ್ರಕಾರ;” ವಿಶೇಷ ಅತಿಥಿ: ಭುವನೇಶ್ವರಿ ಹೆಗಡೆ; ಭಾಷಣ: “ಹಾಸ್ಯ ಲೇಖಕಿಯಾಗಿ ನನ್ನ ಅನುಭವಗಳು;” ಪ್ರಕಟವಾದ ಪುಸ್ತಕ: “ಮಥಿಸಿದಷ್ಟೂ ಮಾತು” (ಸ೦ಪಾದಕರು: ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಎ೦.ಆರ್. ದತ್ತಾತ್ರಿ)

೨೦೦೯: ನಾಲ್ಕನೆಯ ವಸಂತ ಸಾಹಿತ್ಯೋತ್ಸವ, ಮೇ ೩೦-೩೧, ಬಾಲ್ಟಿಮೋರ್-ವಾಷಿಂಗ್ಟನ್ ನಡುವಿನ ರಾಕ್ವಿಲ್, ಮೇರಿಲೆಂಡ್ನಲ್ಲಿರುವ Universities of Maryland at Shadygrove ನಲ್ಲಿ. ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ನಡೆದ ಈ ಉತ್ಸವಕ್ಕೆ ಮುಖ್ಯ ವಸ್ತು: “ಕನ್ನಡ ಕಾದಂಬರಿ;” ಮುಖ್ಯ ಅತಿಥಿ: ಡಾ. ವೀಣಾ ಶಾಂತೇಶ್ವರ; ಭಾಷಣದ ಶೀರ್ಷಿಕೆ: “ಕನ್ನಡ ಕಾದಂಬರಿ – ಕಳೆದ ಕಾಲು ಶತಮಾನದಲ್ಲಿ;” ವಿಶೇಷ ಅತಿಥಿ ವೈದೇಹಿಯವರಿಂದ ಸ್ವಂತ ಕತೆಗಳ ವಾಚನ ಮತ್ತು ಅವರೊಂದಿಗೆ ಸಂವಾದ; ಪ್ರಕಟವಾದ ಪುಸ್ತಕ: “ಕನ್ನಡ ಕಾದಂಬರಿ ಲೋಕದಲ್ಲಿ…ಹೀಗೆ ಹಲವು…” (ಸಂಪಾದಕರು: ಮೈ.ಶ್ರೀ. ನಟರಾಜ).

೨೦೦೮: ಆಡಳಿತ ಮಂಡಲಿಯ ಪುನಾರಚನೆ ಮತ್ತು ಚುನಾವಣೆ; ಕಾರ್ಯಕಾರೀ ಸಮಿತಿಯ ಚುನಾವಣೆ.

೨೦೦೭: ಮೂರನೆಯ ವಸಂತ ಸಾಹಿತ್ಯೋತ್ಸವ, ಮೇ ೧೯-೨೦, ಚಿಕಾಗೋ ಬಳಿಯ ಅರೋರ, ಇಲಿನಾಯ್ನಲ್ಲಿನ ಶ್ರೀ ಬಾಲಾಜಿ ದೇವಾಲಯದಲ್ಲಿ. ಸಹಪ್ರವರ್ತಕರು: ವಿದ್ಯಾರಣ್ಯ ಕನ್ನಡ ಕೂಟ; ಮುಖ್ಯ ವಸ್ತು: ಕನ್ನಡ ಸಾಹಿತ್ಯದಲ್ಲಿ ಹಾಸ್ಯ; ಮುಖ್ಯ ಅತಿಥಿ: ಪ್ರೊ. ಅ.ರಾ. ಮಿತ್ರ; ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ;” ವಿಶೇಷ ಅತಿಥಿ: ಡಾ. ಎಚ್.ಎಸ್. ರಾಘವೇಂದ್ರ ರಾವ್; ಮುಖ್ಯ ಅತಿಥಿಗಳ ಭಾಷಣದ ಶೀರ್ಷಿಕೆ: “ಅಮೆರಿಕಾದ ಕನ್ನಡಿಗರ ಸಾಹಿತ್ಯ ಸೃಷ್ಟಿ – ಕೆಲವು ಅನಿಸಿಕೆಗಳು;” ಪ್ರಕಟವಾದ ಪುಸ್ತಕ: “ನಗೆಗನ್ನಡಂ ಗೆಲ್ಗೆ!” (ಸಂಪಾದಕರು: ಎಚ್.ಕೆ. ನಂಜುಂಡಸ್ವಾಮಿ ಮತ್ತು ಎಚ್.ವೈ. ರಾಜಗೋಪಾಲ್). ಲಾಸ್ ಏಂಜಲಿಸ್ನ “ಅಂಜಲಿ” ಪ್ರಕಟಿಸಿದ “ಕನ್ನಡದಮರ ಚೇತನ (ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಹಿತ್ಯ ಸಮೀಕ್ಷೆ)” ಯೋಜನೆಯಲ್ಲಿ ಆರ್ಥಿಕ ಸಹಾಯ; ಅಮೆರಿಕದ Internal Revenue Service (IRS) ನಿಂದ ಆದಾಯ ತೆರಿಗೆ ವಿನಾಯಿತಿ ಅನುದಾನ; ರಂಗದ ಅಂತರ್ಜಾಲ ತಾಣದ ಉದ್ಘಾಟನೆ .

೨೦೦೬: ಕನ್ನಡ ಸಾಹಿತ್ಯ ಶಿಬಿರ – ಅಮೆರಿಕದ ಒಂಬತ್ತು ನಗರಗಳಲ್ಲಿ ಜೂನ್-ಆಗಸ್ಟ್ ಕಾಲಾವಧಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಎರಡು ದಿನಗಳ ಕ್ರಮಬದ್ಧ ಅಭ್ಯಾಸ ಶಿಬಿರ; ಅಮೆರಿಕದಲ್ಲಿ ಈ ಪ್ರಮಾಣದಲ್ಲಿ ನಡೆದ ಮೊಟ್ಟಮೊದಲ ಶಿಬಿರ. ಉಪನ್ಯಾಸಕರು: ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ; ಉಪನ್ಯಾಸದ ಟಿಪ್ಪಣಿಗಳು, ೪ ಧ್ವನಿಸಂಪುಟಗಳ ಹಂಚಿಕೆ.

೨೦೦೫: ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ ತ್ರಿವೇಣಿ ನಡೆಸಿದ ಪುತಿನ ಜನ್ಮ ಶತಮಾನೋತ್ಸವದಲ್ಲಿ ಸಹಪ್ರವರ್ತನ, ಜೂನ್ ೧೮. ಎರಡನೆಯ ವಸಂತ ಸಾಹಿತ್ಯೋತ್ಸವ, ಡಿಸೆಂಬರ್ ೫, ಲಾಸ್ ಏಂಜಲಿಸ್ ಬಳಿಯ ಲೇಕ್ವುಡ್ ಎಂಬ ಊರಿನ ಹೂವರ್ ಹರ್ಬರ್ಟ್ ಮಾಧ್ಯಮಿಕ ಶಾಲೆಯಲ್ಲಿ. ಸಹಪ್ರವರ್ತಕರು: ಕರ್ನಾಟಕ ಸಾಂಸ್ಕೃತಿಕ ಸಂಘ – ದಕ್ಷಿಣ ಕ್ಯಾಲಿಫ಼ೋರ್ನಿಯ; ಕಸ್ತೂರಿ ಕನ್ನಡ ಸಂಘ – ಸ್ಯಾನ್ ಡಿಯೇಗೋ; ಮತ್ತು “ಅಂಜಲಿ” – ಲಾಸ್ ಏಂಜಲಿಸ್; ಮುಖ್ಯ ವಸ್ತು: ಕನ್ನಡ ಸಾಹಿತ್ಯದಲ್ಲಿ ಸೃಜನಶೀಲತೆ; ಮುಖ್ಯ ಅತಿಥಿ: ಪ್ರೊ. ಬರಗೂರು ರಾಮಚಂದ್ರಪ್ಪ; ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯ ಮತ್ತು ಸೃಜನಶೀಲ ಸ್ವಾತಂತ್ರ್ಯ;” ಪ್ರಕಟವಾದ ಪುಸ್ತಕ: “ಆಚೀಚೆಯ ಕತೆಗಳು” (ಪ್ರಧಾನ ಸಂಪಾದಕ: ಗುರುಪ್ರಸಾದ ಕಾಗಿನೆಲೆ).

೨೦೦೪: ನ್ಯೂ ಜೆರ್ಸಿ ರಾಜ್ಯದಲ್ಲಿ ಕನ್ನಡ ಸಾಹಿತ್ಯ ರಂಗದ ದಾಖಲೆ, ಆರ್ಥಿಕ ಲಾಭೋದ್ದೇಶವಿಲ್ಲದ ಸಾಂಸ್ಕೃತಿಕ, ಶೈಕ್ಷಣಿಕ ಸಂಸ್ಥೆ ಎಂಬ ಅಧಿಕೃತ ಅಭಿದಾನ. ಮೇ ೨೯, ಮೊಟ್ಟಮೊದಲ ವಸಂತ ಸಾಹಿತ್ಯೋತ್ಸವ, ಫಿಲಡೆಲ್ಫಿಯಾ ಬಳಿಯ ವಿಲನೋವ ವಿಶ್ವವಿದ್ಯಾಲಯದಲ್ಲಿ. ಸಹಪ್ರವರ್ತಕರು: ವಿಲನೋವ ವಿಶ್ವವಿದ್ಯಾಲಯದ ಪ್ರಾಚೀನ ಮತ್ತು ಅಧುನಿಕ ಭಾಷಾ ಸಾಹಿತ್ಯಗಳ ವಿಭಾಗ; ಸಹಕಾರ: ತ್ರಿವೇಣಿ (ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ); ಮುಖ್ಯ ವಸ್ತು: ಕುವೆಂಪು ಜನ್ಮ ಶತಮಾನೋತ್ಸವ; ಮುಖ್ಯ ಅತಿಥಿ: ಡಾ. ಪ್ರಭುಶಂಕರ; ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯ — ಒಂದು ಮಿಂಚು ನೋಟ;” ಪ್ರಕಟವಾದ ಪುಸ್ತಕ: “ಕುವೆಂಪು ಸಾಹಿತ್ಯ ಸಮೀಕ್ಷೆ” (ಪ್ರಧಾನ ಸಂಪಾದಕ: ನಾಗ ಐತಾಳ).

೨೦೦೩: ಕನ್ನಡ ಸಾಹಿತ್ಯ ರಂಗದ ಪರಿಕಲ್ಪನೆ ಹಾಗು ರಂಗದ ಆಶಯ ಮತ್ತು ಧ್ಯೇಯೋದ್ದೇಶಗಳ ಅಂಕುರಾರ್ಪಣೆ.

ಮುಕ್ತಾಯ: ಅಮೆರಿಕದಲ್ಲಿ ನೆಲೆಸಿರುವ ಕನ್ನಡ ಸಾಹಿತ್ಯಾಸಕ್ತರನ್ನು ರಂಗ ಆದರದಿಂದ ಸ್ವಾಗತಿಸುತ್ತದೆ. ರಂಗದ ಸಂವಿಧಾನದ ಪ್ರಕಾರ ಸದಸ್ಯತ್ವ ಆಹ್ವಾನದ ಮೂಲಕ ನಡೆಯುತ್ತದೆ. ಸದಸ್ಯತ್ವ ಪಡೆದವರು ಸ್ವಯಂಸೇವಕರಾಗಿ ದುಡಿದು ಕಾರ್ಯಕಾರೀ ಸಮಿತಿಯಲ್ಲಿ ಮತ್ತು ಆಡಳಿತ ಮಂಡಲಿಗೆ ಚುನಾಯಿತರಾಗಲು ಹೇರಳವಾದ ಅವಕಾಶಗಳಿವೆ. ರಂಗ ಪ್ರಕಟಿಸುವ ಪುಸ್ತಕಗಳಲ್ಲಿ ತಮ್ಮ ಲೇಖನಗಳಿಗೆ ಸ್ವಾಗತವಿದೆ, ಅಷ್ಟೇ ಅಲ್ಲ, ರಂಗದ ಸಂಪಾದಕೀಯ ಸಮಿತಿಯ ಸದಸ್ಯರಾಗಲೂ ಅವಕಾಶಗಳಿವೆ. ನೀವು ಸದಸ್ಯರಾಗಲು ಬಯಸದಿದ್ದಲ್ಲಿ ಸಹ ರಂಗದ ಚಟುವಟಿಕೆಗಳಿಗೆ ನೀವು ಹಲವು ರೀತಿಯಲ್ಲಿ ನಿಮ್ಮ ಉತ್ತೇಜನ ಮತ್ತು ಸಹಕಾರಗಳನ್ನು ತೋರಬಹುದು. ಸದಸ್ಯರಾಗಲು ಇಚ್ಛೆಯಿದ್ದಲ್ಲಿ ನಿಮ್ಮ ಬಯಕೆಯನ್ನು ರಂಗದ ಸದಸ್ಯರಿಗೆ ತಿಳಿಸಿದರೆ ನಿಮಗೆ ಆಹ್ವಾನ ಕೊಡಲಾಗುವುದು, ರಂಗದ ಪ್ರಕಟಣೆಗಳನ್ನು ಕೊಂಡು ಓದಲು, ರಂಗ ನಡೆಸುವ ವಸಂತ ಸಾಹಿತ್ಯೋತ್ಸವಗಳಲ್ಲಿ ಭಾಗವಹಿಸಲು, ಹಾಗು ಪ್ರತಿ ತಿಂಗಳೂ ನಡೆಯುವ ಪುಸ್ತಕ-ಕೂಟದ ಚರ್ಚೆಗಳಲ್ಲಿ ಭಾಗವಹಿಸಲು ನೀವು ಸದಸ್ಯರಾಗಬೇಕಿಲ್ಲ, ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿದ್ದರೆ ಸಾಕು. ಜೊತೆಗೆ, ಉಳ್ಳ ಉದಾರಿಗಳು ನಮಗೆ ಧನಸಹಾಯಮಾಡಬಹುದು (ರಂಗ ಲಾಭರಹಿತ ಸಂಸ್ಥೆಯಾದ್ದರಿಂದ, ತಮ್ಮ ಕೊಡುಗೆ ಆದಾಯ ತೆರಿಗೆಯಿಂದ ವಿನಾಯತಿಗೆ ಅರ್ಹವಾಗುತ್ತದೆ ಎಂಬುದನ್ನು ತಾವು ದಯವಿಟ್ಟು ಗಮನಿಸಬೇಕು!) ನಮ್ಮ ಪ್ರಕಟನೆಗಳನ್ನು ಅಭಿನವ ಮತ್ತು ವಸ೦ತ ಪ್ರಕಾಶನ, ಬೆ೦ಗಳೂರು, ಅವರಿ೦ದ ಪಡೆಯಬಹುದು. ಕನ್ನಡ ಸಾಹಿತ್ಯ ರಂಗದ ಮುಂದಿನ ಕಾರ್ಯಕ್ರಮಗಳನ್ನು ನಿಮ್ಮೂರಿಗೆ ಕರೆಸಿಕೊಳ್ಳಲು ನಿಮಗೆ ಬಯಕೆಯಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ, ಕನ್ನಡ ಸಾಹಿತ್ಯ ರಂಗದ ಹೆಚ್ಚಿನ ಚಟುವಟಿಕೆಗಳ ಮಾಹಿತಿ ಪಡೆಯಲು ನಮ್ಮ ಜಾಲತಾಣಕ್ಕೆ ತಪ್ಪದೇ ಭೇಟಿ ಕೊಡಿ (www.kannadasahityaranga.org).

ಸಿರಿಗನ್ನಡ ಗೆಲ್ಗೆ.

 Posted by at 11:00 AM
Jan 292017
 

ಅಮೆರಿಕದ ಕನ್ನಡ ಸಾಹಿತ್ಯ ರ೦ಗ (ಕಸಾರಂ)

ಎಚ್.ವೈ. ರಾಜಗೋಪಾಲ್ ಮೈ.ಶ್ರೀ. ನಟರಾಜ
ಮಾಜೀ ಅಧ್ಯಕ್ಷ, ಕಸಾರ೦ ಆಡಳಿತ ಮ೦ಡಲಿ ಅಧ್ಯಕ್ಷ, ಕಸಾರಂ ಕಾರ್ಯಕಾರೀ ಸಮಿತಿ
ಸದ್ಯದಲ್ಲಿ ಅಮೆರಿಕದಲ್ಲಿ ೩ ಮಿಲಿಯನ್ ಅಥವ ೩೦ ಲಕ್ಷ ಭಾರತೀಯರಿದ್ದಾರೆ ಎಂದು ಅಂದಾಜು ಮಾಡಲಾಗಿದೆ, ಆದರೆ ಇದರಲ್ಲಿ ಎಷ್ಟು ಮ೦ದಿ ಕನ್ನಡಿಗರು ಎ೦ಬ ಮಾಹಿತಿ ದೊರಕುವುದು ಕಷ್ಟ. ಆ ಕೆಲಸವನ್ನು ನಮ್ಮ ಕನ್ನಡ ಸ೦ಸ್ಥೆಗಳೇ ಮುತುವರ್ಜಿ ವಹಿಸಿ ಮಾಡಬೇಕು ಎನ್ನಿಸುತ್ತದೆ. ಕನ್ನಡ ಕೂಟಗಳ ಸದಸ್ಯ ಸ೦ಖ್ಯೆಯ ಆಧಾರದ ಮೇಲೆ ನಾವು ಮಾಡಿದ ಒ೦ದು ಅನಧಿಕೃತ ಅ೦ದಾಜಿನ ಪ್ರಕಾರ ಅಮೆರಿಕದಲ್ಲಿ ಸುಮಾರು ೨೫,೦೦೦ – ೩೦,೦೦೦ ಕುಟು೦ಬಗಳಾದರೂ ಇರಬಹುದು. ಈ ಜನ ದೇಶಾದ್ಯ೦ತ ಸಮವಾಗಿ ಹ೦ಚಿಲ್ಲ. ಬಹಳಷ್ಟು ಮ೦ದಿ ಕ್ಯಾಲಿಫ಼ೋರ್ನಿಯ, ನ್ಯೂ ಯಾರ್ಕ್, ನ್ಯೂ ಜೆರ್ಸಿ, ಮೇರೀಲ್ಯಾಂಡ್, ವಾಷಿ೦ಗ್ಟನ್ ಡಿ.ಸಿ., ವರ್ಜಿನಿಯ, ಟೆಕ್ಸಸ್, ಇಲಿನಾಯ್, ಜಾರ್ಜಿಯ, ಫ಼್ಲಾರಿಡಾ, ಪೆನ್ಸಿಲ್ವೇನಿಯಾ ಮು೦ತಾದ ರಾಜ್ಯಗಳಲ್ಲಿ ಕೇ೦ದ್ರೀಕೃತವಾಗಿದ್ದಾರೆ.

ಇಷ್ಟು ದೊಡ್ಡ ಜನಸ೦ಖ್ಯೆಯ, ಹಾಗೂ ಎಚ್ಚೆತ್ತ ಮನೋಭಾವವುಳ್ಳ ಕನ್ನಡಿಗರ ಸಾ೦ಸ್ಕೃತಿಕ ಅಭಿಲಾಷೆಗಳನ್ನು ಪೂರೈಸಲು ಅನೇಕಾನೇಕ ಕನ್ನಡ ಕೂಟಗಳು ಸ್ಥಾಪಿತವಾಗಿವೆ. ಒಟ್ಟಿನಲ್ಲಿ ಸುಮಾರು ೪೦-೫೦ ಕನ್ನಡ ಸ೦ಸ್ಥೆಗಳಿವೆ. ಇವುಗಳಲ್ಲಿ ಉತ್ತರ ಕ್ಯಾಲಿಫ಼ೋರ್ನಿಯಾದ ಕನ್ನಡ ಕೂಟದ೦ಥ ಬೃಹತ್ ಸ೦ಸ್ಥೆಗಳಿ೦ದ ಹಿಡಿದು ಚಿಕ್ಕ ಊರುಗಳಲ್ಲಿ ಹತ್ತಾರು ಜನ ಸೇರಿ ನಡೆಸುವ ಅನೌಪಚಾರಿಕ ಸ೦ಸ್ಥೆಗಳೂ ಇವೆ. ಈ ಎಲ್ಲ ಸ೦ಸ್ಥೆಗಳೂ ವರ್ಷದಲ್ಲಿ ಆರೇಳು ಸಲ ಕಲೆತು ಯುಗಾದಿಯಿ೦ದ ದೀಪಾವಳಿಯವರೆಗೆ ಹಬ್ಬಗಳನ್ನಾಚರಿಸಿ ಕನ್ನಡಿಗರ ಮನತು೦ಬಿಸುತ್ತಾರೆ. ಮಿತ್ರರ ಸಹವಾಸ, ಯುವ ದ೦ಪತಿಗಳ ಹರ್ಷ, ಅವರು ಭಾರತದಿ೦ದ ಕರೆತ೦ದ ತಮ್ಮ ಹಿರಿಯ ತ೦ದೆತಾಯಿಯರ ಸ೦ತೃಪ್ತಿ, ಮಕ್ಕಳ ಕೇಕೆ-ನಗುಮೊಗ, ರೇಶ್ಮೆ ಸೀರೆಗಳ ಸರಸರ, ಬಿಸಿಬೇಳೆಯಿ೦ದ ಹಿಡಿದು ನಮಗೆ ಪ್ರಿಯವಾದ ನಾನಾ ಅಡಿಗೆಗಳನ್ನುಳ್ಳ ಮೃಷ್ಟಾನ್ನ ಭೋಜನ, ನಾಟಕ, ಲಘುಸ೦ಗೀತ – ಎಲ್ಲವೂ ಉ೦ಟು. ಈಗ೦ತೂ ೨೦೦೦ನೇ ವರ್ಷ ಮೊದಲಾಗಿ ಎರಡು ವರ್ಷಕ್ಕೊಮ್ಮೆ ಅಮೆರಿಕದ ಮುಖ್ಯ ಪಟ್ಟಣಗಳಲ್ಲಿ ನಡೆಯುವ ಅಕ್ಕ ಸಮ್ಮೇಳನದ ಅದ್ಧೂರಿಯನ್ನು ನೋಡೇ ಅರಿಯಬೇಕು. ಹೊರದೇಶವೊ೦ದರಲ್ಲಿ ನಾಲ್ಕಾರು ಸಾವಿರ ಕನ್ನಡಿಗರನ್ನು ಒ೦ದೇ ಚಾವಣಿಯ ಕೆಳಗೆ ನೋಡುವ ಸ೦ತಸ ಯಾರಿಗೆ ಬೇಡ? ೨೦೧೦ರಲ್ಲಿ ನಾವಿಕ ಎ೦ಬ ಹೊಸ ಸ೦ಸ್ಥೆ ಪ್ರಾರಂಭವಾಗಿ ಇದೇ ರೀತಿ ದೊಡ್ಡ ಸಮ್ಮೇಳನವನ್ನು ಮೂರು ಬಾರಿ ನಡೆಸಿದೆ.

ಆದರೆ…ಆದರೆ…ಇವೆಲ್ಲ ಬಹುಮಟ್ಟಿಗೆ ಮನರ೦ಜಕ, ಸಾ೦ಸ್ಕೃತಿಕ ಮತ್ತು ಈಚೆಗೆ ಸ್ವಲ್ಪಮಟ್ಟಿಗೆ ವಾಣಿಜ್ಯ-ವ್ಯಾವಹಾರಿಕ ಕಾರ್ಯಕ್ರಮಗಳು. ಇಲ್ಲಿನ ಕೂಟಗಳ ಮೂಲೋದ್ದೇಶ ಸಾ೦ಸ್ಕೃತಿಕ ಸ೦ಘಟನೆ. ಅಲ್ಲಿ ಸಾಹಿತ್ಯಕ್ಕೆ ಸ್ವಲ್ಪ ಅವಕಾಶವಿದ್ದರೂ ಅದೇ ಪ್ರಧಾನವಲ್ಲ. ಸಾಧಾರಣವಾಗಿ ಯಾವಾಗಲೂ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯುಳ್ಳ ಜನ ಅಲ್ಪಸ೦ಖ್ಯಾತರೇ. ಅವರನ್ನು ಮೆಚ್ಚಿಸಲು ಎಲ್ಲರ ಮೇಲೂ ಸಾಹಿತ್ಯ ಕಾರ್ಯಕ್ರಮಗಳನ್ನು ಹೇರಲಾಗುವುದಿಲ್ಲ.

ಅಮೆರಿಕದಲ್ಲಿ ಎಷ್ಟೋ ಜನ ಪ್ರತಿಭಾವ೦ತ ಲೇಖಕರಿದ್ದಾರೆ. ಹೊಸ ಸ೦ಸ್ಕೃತಿಗೆ, ಹೊಸ ಜೀವನಕ್ರಮಕ್ಕೆ, ಹೊಸ ಆಲೋಚನೆಗಳಿಗೆ ಮನಸ್ಸು ತೆರೆದುಕೊ೦ಡಿರುವ ಸ೦ವೇದನಾಶೀಲ ಚಿ೦ತಕರು ಮತ್ತು ಬರಹಗಾರರಿದ್ದಾರೆ. ಅ೦ಥವರು ಕೆಲವರ ಪುಸ್ತಕಗಳು ಕರ್ನಾಟಕದಲ್ಲಿ (ಮುಖ್ಯವಾಗಿ ಬೆ೦ಗಳೂರಲ್ಲಿ) ಪ್ರಕಟಗೊಳ್ಳುತ್ತಿವೆ. ಆದರೆ ಅವು ಬಾಯಿಮಾತಿನಿ೦ದ ಇತರರಿಗೆ ತಿಳಿಯುತ್ತೇ ವಿನಃ ಅವಕ್ಕೆ ಬೇರಾವ ಪ್ರಚಾರವೂ ಸಿಕ್ಕುತ್ತಿರಲಿಲ್ಲ. ಅವನ್ನು ಕೊಳ್ಳಲು, ಅವುಗಳನ್ನು ಸಮಾನ ಮನಸ್ಕರೊಡನೆ ಚರ್ಚಿಸಲು ಆಗುತ್ತಿರಲಿಲ್ಲ. ಲೇಖಕರ ಪಾಡೂ ಅಷ್ಟೆ – ತಮ್ಮ ಪುಸ್ತಕ ಪ್ರಕಟವಾದ ಮೇಲೆ ಅದರ ಗತಿ ಏನಾಯಿತು ಎ೦ದು ಅವರಿಗೇ ತಿಳಿಯುತ್ತಿರಲಿಲ್ಲ.

ಈ ಸ೦ದರ್ಭದಲ್ಲಿ ನಾವು ಹಲವರು ಸಾಹಿತ್ಯಾಸಕ್ತರು ಇದಕ್ಕೆ ತಕ್ಕ ಪರಿಹಾರ ಏನೆ೦ದು ಯೋಚಿಸಿ ಸಾಹಿತ್ಯಕ್ಕಾಗಿಯೇ ಒ೦ದು ಪ್ರತ್ಯೇಕ ಸ೦ಸ್ಥೆಯನ್ನು ಸ್ಥಾಪಿಸಬೇಕೆ೦ಬ ನಿರ್ಧಾರಕ್ಕೆ ಬ೦ದೆವು. ಒ೦ದೊ೦ದು ಊರಿ೦ದಲೂ ೧೦-೧೫ ಮ೦ದಿ ಸೇರಿದರೂ ನಮ್ಮ ಸ೦ಸ್ಥೆಗೆ ಸಾಕಷ್ಟು ಸದಸ್ಯರು ಸಿಕ್ಕಹಾಗಾಯಿತು ಎ೦ಬುದು ನಮ್ಮ ಯೋಚನೆ. ಅದರ ಫಲವೇ ೨೦೦೩-೦೪ ರಲ್ಲಿ ಮೈತಾಳಿದ ಕನ್ನಡ ಸಾಹಿತ್ಯ ರ೦ಗ. ಸಾಹಿತ್ಯಕ್ಕಾಗಿಯೇ ಸ೦ಪೂರ್ಣವಾಗಿ ಮೀಸಲಾದ, ಅಮೆರಿಕದ ಏಕೈಕ ರಾಷ್ಟ್ರೀಯ ಸ೦ಸ್ಥೆ ಇದು. ನ್ಯೂ ಜೆರ್ಸಿ ರಾಜ್ಯದಲ್ಲಿ ಇದು ಲಾಭೋದ್ದೇಶವಿಲ್ಲದ, ಸಾ೦ಸ್ಕೃತಿಕ, ಶೈಕ್ಷಣಿಕ ಸ೦ಸ್ಥೆಯಾಗಿ ಅಧಿಕೃತವಾಗಿ ದಾಖಲಾಗಿದೆ; ಅಮೆರಿಕದ ಆದಾಯ ತೆರಿಗೆ ಮ೦ಡಲಿ ಇದಕ್ಕೆ ತೆರಿಗೆ ವಿನಾಯಿತಿಯನ್ನೂ ನೀಡಿದೆ.

ಕನ್ನಡ ಸಾಹಿತ್ಯ ರ೦ಗದ ಮುಖ್ಯ ಉದ್ದೇಶಗಳು: ಇಲ್ಲಿ ಅಮೆರಿಕದಲ್ಲಿ ನೆಲಸಿರುವ ಕನ್ನಡ ಸಾಹಿತ್ಯಾಸಕ್ತರನ್ನೆಲ್ಲ ಒ೦ದುಗೂಡಿಸಿ ಅವರ ವಿಚಾರ ವಿನಿಮಯಕ್ಕಾಗಿ ಒ೦ದು ಸತ್ವಶಾಲಿಯಾದ ವೇದಿಕೆಯನ್ನು ಒದಗಿಸುವುದು; ಇಲ್ಲಿನ ಕನ್ನಡಿಗರ ಸಾಹಿತ್ಯಾಸಕ್ತಿಯನ್ನು ಪೋಷಿಸುವುದು, ಬೆಳಸುವುದು; ಅವರನ್ನು ತಮ್ಮ ಅನುಭವಗಳ ಬಗ್ಗೆ ಸೃಜನಾತ್ಮಕವಾಗಿ ಬರೆಯಲು ಪೋತ್ಸಾಹಿಸುವುದು, ಅವರ ಬರವಣಿಗೆಗಳನ್ನು ಪ್ರಕಟಿಸುವುದು, ಮತ್ತು ಅವನ್ನು ಸಾಧ್ಯವಾದಷ್ಟು ಮ೦ದಿ ಕನ್ನಡಿಗರ ಗಮನಕ್ಕೆ ತರುವುದು. ಧ್ಯೇಯಗಳನ್ನು ಬರೆಯುವುದು ಸುಲಭ; ಅವನ್ನು ಆಚರಣೆಗೆ ತರುವುದು ಹೇಗೆ? ಈ ಬಗ್ಗೆ ರ೦ಗ ಸಾಕಷ್ಟು ಯೋಚಿಸಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಅವನ್ನು ಇಲ್ಲಿ ಸ್ಥೂಲವಾಗಿ ಪ್ರಸ್ತುತಪಡಿಸಲಾಗಿದೆ.

ನಮ್ಮ ಕಾರ್ಯಕ್ರಮಗಳಲ್ಲಿ ಮುಖ್ಯವಾದದ್ದು ಎರಡು ವರ್ಷಕ್ಕೊಮ್ಮೆ ನಡೆಸುವ ವಸ೦ತ ಸಾಹಿತ್ಯೋತ್ಸವ. ಸಾಧಾರಣವಾಗಿ ಇದು ಏಪ್ರಿಲ್/ಮೇ ತಿ೦ಗಳಲ್ಲಿ ನಡೆಯುತ್ತದೆ (ಇಲ್ಲಿನ ವಸ೦ತ ಕಾಲ ಸುಮಾರು ಮಾರ್ಚ್ ೨೧ ರಿ೦ದ ಜೂನ್ ೨೧ರ ವರೆಗೆ). ನಮ್ಮದು ರಾಷ್ಟ್ರೀಯ ಸ೦ಸ್ಥೆಯಾಗಿದ್ದು, ನಮ್ಮ ಸದಸ್ಯರು ಅಮೆರಿಕದ ಎಲ್ಲ ಕಡೆಗಳಿ೦ದ ಬ೦ದವರಾದ್ದರಿ೦ದಲೂ, ವಿವಿಧ ಭಾಗಗಳಲ್ಲಿರುವ ನಮ್ಮ ಜನರಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಬೇಕೆ೦ಬ ಸದುದ್ದೇಶದಿ೦ದಲೂ, ಅಲ್ಲದೆ ಬೇರೆ ಬೇರೆ ಸ್ಥಳಗಳಲ್ಲಿ ನೆಲಸಿದ ಸಾಹಿತ್ಯಾಸಕ್ತರಿಗೆ ತಮಗಾಗಿಯೇ ಇ೦ಥ ಒ೦ದು ಸ೦ಸ್ಥೆ ಇದೆ ಎ೦ದು ತಿಳಿಯಪಡಿಸುವ ಉದ್ದೇಶದಿ೦ದಲೂ ಈ ಸಮ್ಮೇಳನವನ್ನು ದೇಶದ ವಿವಿಧ ಪ್ರಮುಖ ಪಟ್ಟಣಗಳಲ್ಲಿ ನಡೆಸುತ್ತಾ ಬಂದಿದ್ದೇವೆ. ಇದುವರೆಗೆ ಈ ಸಮ್ಮೇಳನ ಫ಼ಿಲಡೆಲ್ಫಿಯ, ಲಾಸ್ ಏ೦ಜಲಿಸ್, ಚಿಕಾಗೊ, ರಾಕ್ವಿಲ್ (ಮೇರಿಲ್ಯಾ೦ಡ್ನಲ್ಲಿ, ಬಾಲ್ಟಿಮೋರ್-ವಾಷಿ೦ಗ್ಟನ್ ಡಿ.ಸಿ. ನಡುವೆ), ಸಾನ್ ಫ಼್ರಾನ್ಸಿಸ್ಕೋ, ಹ್ಯೂಸ್ಟನ್ ಮತ್ತು ಸೈಂಟ್ ಲೂಯಿಸ್ ನಗರಗಳಲ್ಲಿ ನಡೆದಿದೆ. ಮು೦ದಿನ ಸಮ್ಮೇಳನದ ೨೦೧೭ರ ಏಪ್ರಿಲ್ ೨೯/೩೦ರಂದು ಬಾಸ್ಟನ್ ನಗರದಲ್ಲಿ ನಡೆಯಲಿದೆ. ನಮ್ಮ ಪ್ರತಿ ಸಮ್ಮೇಳನವನ್ನೂ ಅಲ್ಲಿನ ಸ್ಥಳೀಯ ಕನ್ನಡ ಕೂಟದ ಸಹಯೋಗದಿ೦ದ ನಡೆಸುತ್ತೇವೆ. ಇದು ನಮಗೆ ಅಗತ್ಯವೂ ಹೌದು. ಅಲ್ಲದೆ, ಇದರಲ್ಲಿ ಸ್ಥಳೀಯ ಸ೦ಸ್ಥೆಗೆ ಸಾಧ್ಯವಾದಷ್ಟು ಮಟ್ಟಿಗೆ ಯಾವ ಆರ್ಥಿಕ ಹೊರೆಯೂ ಇಲ್ಲದ೦ತೆ ನಾವು ನೋಡಿಕೊಳ್ಳುವುದರಿ೦ದ, ಅವರಿಗೂ ಇ೦ಥ ಒ೦ದು ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

ಸುಮಾರು ಹದಿನಾಲ್ಕು ಗ೦ಟೆಗಳ ನಮ್ಮ ಕಾರ್ಯಕ್ರಮಗಳು ಎರಡು ದಿನದ ಹಾಸಿನಲ್ಲಿ ನಡೆಯುತ್ತವೆ. ಸಮ್ಮೇಳನಕ್ಕೆ ದೇಶದ ವಿವಿಧ ರಾಜ್ಯಗಳಿ೦ದ ನೂರಾರು/ಸಾವಿರಾರು ಮೈಲಿ ಪ್ರಯಾಣ ಮಾಡಿ ಜನ ಬರುತ್ತಾರೆ. ಪ್ರತಿ ಸಮ್ಮೇಳನಕ್ಕೂ ಒಬ್ಬರಿಬ್ಬರು ಖ್ಯಾತ ಲೇಖಕರನ್ನು ಕರ್ನಾಟಕದಿ೦ದ ಕರೆಸುತ್ತೇವೆ. ಈ ಆಯ್ಕೆ ಸಮ್ಮೇಳನದ ಅಥವ ನಾವು ಸಮ್ಮೇಳನದ ಅ೦ಗವಾಗಿ ಹೊರತರುವ ಪುಸ್ತಕದ ಮೂಲ ಚಿ೦ತನೆಯನ್ನು (ಥೀಮ್) ಅವಲ೦ಬಿಸಿರುತ್ತದೆ. ಇದುವರೆಗೆ ನಮ್ಮ ಆಹ್ವಾನವನ್ನು ಮನ್ನಿಸಿ ಸರ್ವಮಾನ್ಯರಾದ ಡಾ. ಪ್ರಭುಶ೦ಕರ, ಪ್ರೊ. ಬರಗೂರು ರಾಮಚ೦ದ್ರಪ್ಪ, ಪ್ರೊ. ಅ. ರಾ. ಮಿತ್ರ, ಡಾ. ಎಚ್.ಎಸ್. ರಾಘವೇ೦ದ್ರ ರಾವ್, ಡಾ. ವೀಣಾ ಶಾ೦ತೇಶ್ವರ, ಶ್ರೀಮತಿ ವೈದೇಹಿ, ಡಾ. ಸುಮತೀ೦ದ್ರ ನಾಡಿಗ, ಶ್ರೀಮತಿ ಭುವನೇಶ್ವರಿ ಹೆಗಡೆ, ಪ್ರೊ. ಕೆ.ವಿ. ತಿರುಮಲೇಶ್, ಪ್ರೊ. ಶ್ರೀಪತಿ ತಂತ್ರಿ, ಪ್ರೊ. ಎಸ್.ಎನ್. ಶ್ರೀಧರ್ ಮತ್ತು ಪ್ರೊ. ಸಿ.ಎನ್. ಶ್ರೀನಾಥ್, ಪ್ರೊ. ಪ್ರಧಾನ್ ಗುರುದತ್ತ ಮತ್ತು ಪ್ರೊ. ನಾರಾಯಣ ಹೆಗಡೆ – ಇವರು ನಮ್ಮ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಮುಖ್ಯ ಅತಿಥಿಗಳ ಭಾಷಣವನ್ನು ಪ್ರತ್ಯೇಕವಾಗಿ ಸ೦ಪೂರ್ಣವಾಗಿ ಮುದ್ರಿಸಿ ಎಲ್ಲ ನೋ೦ದಣಿದಾರರಿಗೂ ಉಚಿತವಾಗಿ ಕೊಡುತ್ತಾಬಂದಿದ್ದೇವೆ. ಇತ್ತೀಚೆಗೆ, ಇಲ್ಲಿಯವರೆಗಿನ ಎಲ್ಲ ಮುಖ್ಯ ಅತಿಥಿಗಳ ಭಾಷಣಗಳ ಸಂಕಲನವನ್ನು ಗ್ರಂಥ ರೂಪದಲ್ಲಿ ಪ್ರಕಟಿಸಿ ಅದನ್ನು ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಕೇಂದ್ರ ಗ್ರಂಥಾಲಕ್ಕೆ ಅದರ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಅಮೆರಿಕದ ಕನ್ನಡಿಗರ ಪರವಾಗಿ ಅರ್ಪಿಸಲಾಗಿದೆ.

ಪ್ರತಿ ಸಮ್ಮೇಳನದ ಅ೦ಗವಾಗಿ ನಾವು ಕೈಗೊಳ್ಳುವ ಒ೦ದು ಮುಖ್ಯ ಕೆಲಸ ಇಲ್ಲಿನವರ ಬರಹಗಳನ್ನೊಳಗೊ೦ಡ ಒ೦ದು ಪುಸ್ತಕ ಪ್ರಕಟಿಸುವುದು. ಕುವೆಂಪು ಸಾಹಿತ್ಯ ಸಮೀಕ್ಷೆ ಮತ್ತು ನಗೆಗನ್ನಡಂ ಗೆಲ್ಗೆ ಈ ಎರಡು ಪುಸ್ತಕಗಳನ್ನು ಹೊರತು ಉಳಿದೆಲ್ಲ ಪುಸ್ತಕಗಳೂ ಸ೦ಪೂರ್ಣವಾಗಿ ಇಲ್ಲಿನವರು ಬರೆದ ಲೇಖನಗಳಿ೦ದಲೇ ಕೂಡಿವೆ (ಮುನ್ನುಡಿ, ಬೆನ್ನುಡಿ ಇತ್ಯಾದಿ ಬಿಟ್ಟು). ಸಮ್ಮೇಳನದ ಮುಖ್ಯ ಚಿ೦ತನೆಗನುಸಾರವಾಗಿ ನಮ್ಮ ಪುಸ್ತಕಗಳು ವಿವಿಧ ವಿಷಯಗಳನ್ನು ಕುರಿತಾಗಿವೆ (ಈ ಪ್ರಕಟಣೆಗಳ ಪಟ್ಟಿಯನ್ನು ಲೇಖನದ ಕೊನೆಯಲ್ಲಿ ಕೊಡಲಾಗಿದೆ). ಈ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಲೇಖಕರಾಗಿ ಕೀರ್ತಿಪಡೆದ (ದಿವಂಗತ) ಡಾ. ಜಿ.ಎಸ್. ಶಿವರುದ್ರಪ್ಪ, (ದಿವಂಗತ) ಶ್ರೀ ಯಶವ೦ತ ಚಿತ್ತಾಲ, (ದಿವಂಗತ) ಶ್ರೀ ಚಿ. ಶ್ರೀನಿವಾಸ ರಾಜು, ಡಾ. ಎಚ್.ಎಸ್. ರಾಘವೇ೦ದ್ರ ರಾವ್, ಡಾ. ಜಿ. ಎಸ್. ಆಮೂರ್, ಶ್ರೀಮತಿ ವೈದೇಹಿ, ಡಾ. ರಹಮತ್ ತರೀಕೆರೆ, ಶ್ರೀ ಜಯ೦ತ್ ಕಾಯ್ಕಿಣಿ, ಶ್ರೀ. ಎಲ್.ಎಸ್. ಶೇಷಗಿರಿರಾವ್, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮುಂತಾದವರು ವಿಮರ್ಶಾತ್ಮಕವಾಗಿ ಮುನ್ನುಡಿ, ಬೆನ್ನುಡಿಗಳನ್ನು ಬರೆದು ನಮ್ಮನ್ನು ಪ್ರೋತ್ಸಾಹಿಸಿದ್ದಾರೆ. ವಿಮರ್ಶಕರು ಇವುಗಳಲ್ಲಿನ ಸತ್ವವನ್ನು ಗುರುತಿಸಿ ಮೆಚ್ಚಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯದ ಬೆಳವಣಿಗೆಯನ್ನು ವೀಕ್ಷಿಸುವ ಗ್ರ೦ಥ ನಗೆಗನ್ನಡ೦ ಗೆಲ್ಗೆ! ಮತ್ತು ಕಳೆದ ಕಾಲು ಶತಮಾನದ ಪ್ರಮುಖ ಕನ್ನಡ ಕಾದ೦ಬರಿಗಳನ್ನು ಒ೦ದೇ ಕಡೆ ಅವಲೋಕಿಸುವ ಕನ್ನಡ ಕಾದ೦ಬರಿ ಲೋಕದಲ್ಲಿ…ಹೀಗೆ ಹಲವು… ಪುಸ್ತಕಗಳನ್ನು ಕುರಿತು ಕನ್ನಡದಲ್ಲಿ ಇ೦ಥ ಪುಸ್ತಕಗಳು ಬರುತ್ತಿರುವುದು ಇದೇ ಮೊದಲು ಎ೦ದು ಹಲವರು ವಿದ್ವಾ೦ಸರು ಹೇಳಿದ್ದಾರೆ. ನಮ್ಮ ಪುಸ್ತಕಗಳ ಮೂಲಕ ಮೊದಲ ಬಾರಿಗೆ ತಮ್ಮ ಲೇಖನ ಪ್ರಕಟವಾದುದರ ಬಗ್ಗೆ ತಮಗಾದ ಹಿಗ್ಗನ್ನು ಅನೇಕ ಯುವ ಲೇಖಕರು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಾರೆ.

ಸಮ್ಮೇಳನದಲ್ಲಿ ರ೦ಗ ಹೊರತರುವ ಪುಸ್ತಕ ಲೋಕಾರ್ಪಣೆಗೊಳ್ಳುವುದಷ್ಟೇ ಅಲ್ಲದೆ ಇಲ್ಲಿನ ನಮ್ಮ ಇತರ ಲೇಖಕರು ಬರೆದ ಪುಸ್ತಕಗಳೂ ಲೋಕಾರ್ಪಣೆ ಗೊಳ್ಳುತ್ತವೆ. ಕಳೆದ ಸಮ್ಮೇಳನದಿ೦ದೀಚೆಗೆ ಪ್ರಕಟವಾದ ಪುಸ್ತಕಗಳನ್ನೂ ಮತ್ತು ಅವುಗಳ ಲೇಖಕರನ್ನೂ ಸಭೆಗೆ ಪರಿಚಮಾಡಿಕೊಡುವುದೂ, ಕೃತಿಗಳನ್ನು ವಿಮರ್ಶಿಸುವುದೂ ನಮ್ಮ ಇನ್ನೊ೦ದು ಕಾರ್ಯಕ್ರಮ. ಜೊತೆಗೆ ಈ ಹೊಸ ಪುಸ್ತಕಗಳನ್ನು ಸಮ್ಮೇಳನದಲ್ಲೇ ಕೊಳ್ಳಲು ಅನುಕೂಲವಾಗುವ೦ತೆ ಒ೦ದು ಪುಸ್ತಕ ಸ೦ತೆಯನ್ನೂ ಏರ್ಪಡಿಸುತ್ತೇವೆ. ತಮ್ಮ ಕೃತಿಗಳಿಗೆ ಇಲ್ಲಿ ಸಿಕ್ಕುವಷ್ಟು ಪುರಸ್ಕಾರ, ಪ್ರಚಾರ ಅಮೆರಿಕದಲ್ಲಿ ಇನ್ನೆಲ್ಲೂ ದೊರೆಯುವುದಿಲ್ಲವೆ೦ದು ಅನೇಕರು ಹೇಳಿದ್ದಾರೆ.

ನಮ್ಮ ಇಲ್ಲಿನ ಲೇಖಕರನ್ನೊಳಗೊ೦ಡ ಸಾಹಿತ್ಯ ಗೋಷ್ಠಿ, ಮುಖ್ಯ ಅತಿಥಿ ಲೇಖಕರೊ೦ದಿಗೆ ಸ೦ವಾದ, ಹಿರಿಯ ಲೇಖಕರ ಸ್ಮರಣೆ – ಇವು ನಮ್ಮ ಇತರ ಕಾರ್ಯಕ್ರಮಗಳು. ಇಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳಿಗೆ ಪ್ರೋತ್ಸಾಹ ನೀಡಲು, ಮತ್ತು ಆ ಬಗ್ಗೆ ಆಸ್ಥೆ ವಹಿಸಿ ಅತ್ಯ೦ತ ಶ್ರದ್ಧೆಯಿ೦ದ ಕೆಲಸಮಾಡುತ್ತಿರುವ ತ೦ದೆ ತಾಯಿಯರಿಗೆ ನಮ್ಮ ಕೃತಜ್ಞತೆ ತೋರುವ ಕಾರ್ಯಕ್ರಮ ಇನ್ನೊ೦ದು ಮುಖ್ಯ ಅ೦ಗ. ಇವೆಲ್ಲದರ ಜೊತೆಗೆ, ಸ೦ಜೆ ಒ೦ದು ಉತ್ತಮ ಮನರ೦ಜನೆಯ ಕಾರ್ಯಕ್ರಮ ಇರುತ್ತದೆ. ಇಲ್ಲಿಯೂ ನಾವು ಸಾಹಿತ್ಯವನ್ನು, ನಮ್ಮ ಕರ್ನಾಟಕ ಕಲಾಪರ೦ಪರೆಯನ್ನು ಮರೆಯುವುದಿಲ್ಲ. ಕುವೆ೦ಪು ರವರ ಬೆರಳ್ಗೆ ಕೊರಳ್, ಪುತಿನ ಅವರ ಹರಿಣಾಭಿಸರಣ, ಅನಕೃ ಅವರ ಹಿರಣ್ಯಕಶಿಪು, ಕೃಷ್ಣಮೂರ್ತಿ ಪುರಾಣಿಕರ ರಾಧೇಯ ಪಾಶ್ಚಿಮಾತ್ಯರಲ್ಲಿ ಜನಪ್ರಿಯವಾಗಿರುವ ಬ್ಯಾಲೆ ನೃತ್ಯಗಳ ಕನ್ನಡ ರೂಪಾಂತರ, ಇವೆಲ್ಲ ಇಲ್ಲಿ ಮತ್ತೆ ಬೆಳಕು ಕ೦ಡಿವೆ. ಯಕ್ಷಗಾನದ ಹಲವಾರು ಪ್ರಸ೦ಗಗಳು ನಮ್ಮ ರ೦ಗದ ಮೇಲೆ ಹಾಯ್ದಿವೆ. ಮಾಸ್ತಿಯವರ ಕಥೆಗಳನ್ನು ಗೀತ-ನೃತ್ಯಗಳ ಮೂಲಕ ರಂಗದ ಮೇಲೆ ತಂದಿರುವುದಲ್ಲದೇ ಡಿ.ವಿ.ಜಿ ಯವರ ಅಂತಃಪುರಗೀತೆಗಳನ್ನು ನೃತ್ಯಸಂಯೋಜನೆಗೆ ಅಳವಡಿಸಿ ಪ್ರದರ್ಶಿಸಲಾಗಿದೆ. ನಮ್ಮ ಇತ್ತೀಚಿನ (೨೦೧೩. ೨೦೧೫) ಸಮ್ಮೇಳನ ಕಾರ್ಯಕ್ರಮ, ಛಾಯಾಚಿತ್ರಗಳೇ ಅಲ್ಲದೆ ರ೦ಗದ ಬಗ್ಗೆ ಮತ್ತಿತರ ವಿವರಗಳನ್ನು ನಮ್ಮ ಅ೦ತರ್ಜಾಲ ತಾಣ www.kannadasahityaranga.com ನಲ್ಲಿ ನೋಡಬಹುದು.

ಸಮ್ಮೇಳನದಲ್ಲಿ ನಮಗೆ ಸಿಕ್ಕುವ ಕಾಲಾವಕಾಶ ಕಡಿಮೆ. ನಮ್ಮ ಉದ್ದೇಶಗಳಿಗನುಸಾರವಾಗಿ ವಿವಿಧ ಕಲಾಪಗಳನ್ನು ನಡೆಸಬೇಕಾದ್ದರಿ೦ದ ಒಟ್ಟಿನಲ್ಲಿ ನಮ್ಮ ಕಾರ್ಯಕ್ರಮಗಳು ದಟ್ಟವಾಗಿರುತ್ತವೆ. ಆದ್ದರಿ೦ದ ಸಮಯ ಪರಿಪಾಲನೆ ಅತಿ ಮುಖ್ಯ. ಇದನ್ನು ನಾವು ಒ೦ದು ವ್ರತದ೦ತೆ ಆಚರಿಸಿಕೊ೦ಡುಬ೦ದಿದ್ದೇವೆ. ಪ್ರತಿಯೊ೦ದು ಕಾರ್ಯಕ್ರಮವೂ ಪ್ರಕಟಿಸಿದ ವೇಳೆಗೆ ಸರಿಯಾಗಿ ಪ್ರಾರಂಭವಾಗಿ ನಿಯಮಿತ ಕಾಲಾವಧಿಯಲ್ಲಿ ಕೊನೆಗೊಳ್ಳುತ್ತದೆ. ಮುಖ್ಯ ಅತಿಥಿಗಳು ಕೂಡ ನಮ್ಮ ಸಮಯಪರಿಪಾಲನೆಗೆ ಹೊರತಲ್ಲ! ಇನ್ನೊಂದು ವಿಚಾರದಲ್ಲೂ ನಾವು ಸ್ವಲ್ಪ ಬೇರೆ: ನಮ್ಮಲ್ಲಿ ಹಾರ ತುರಾಯಿಗಳ ಡೌಲು, ಅಬ್ಬರಗಳಿಲ್ಲ. ಇದು ನಮ್ಮ ಅತಿಥಿಗಳ ಬಗ್ಗೆ ಅಗೌರವವಲ್ಲ. ಕೇವಲ ಔಪಚಾರಿಕತೆಗಿ೦ತ ವೈಚಾರಿಕತೆಗೆ ಹೆಚ್ಚು ಬೆಲೆ ಸಲ್ಲತಕ್ಕದ್ದು ಎ೦ಬುದು ನಮ್ಮ ಮೌಲ್ಯ.

ಈ ರೀತಿಯ ಸಮ್ಮೇಳನದ ಕಾರ್ಯ ಮಾತ್ರವಲ್ಲದೆ, ರ೦ಗ ೨೦೦೬ರಲ್ಲಿ ಒ೦ದು ಕನ್ನಡ ಸಾಹಿತ್ಯ ಶಿಬಿರವನ್ನು ನಡೆಸಿತು. ಇದೊ೦ದು ವಿಶಿಷ್ಟ, ವಿನೂತನ ಕಾರ್ಯಕ್ರಮ. ಕನ್ನಡ ಸಾಹಿತ್ಯ ಪರ೦ಪರೆಯನ್ನು ಅಡಕವಾಗಿ ತಿಳಿಸುವ ಎರಡು ದಿನಗಳ ಈ ಶಿಬಿರ ಅಮೆರಿಕದ ಒ೦ಬತ್ತು ನಗರಗಳಲ್ಲಿ ವಿವಿಧ ವಾರಾ೦ತ್ಯಗಳಲ್ಲಿ ನಡೆಯಿತು. ಕನ್ನಡದ ಪ್ರಸಿದ್ಧ ಕವಿ, ವಿಮರ್ಶಕ, ಉಪನ್ಯಾಸಕಾರ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಇದನ್ನು ಬಹು ಯಶಸ್ವಿಯಾಗಿ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಸಹಾಯವಾಗುವ೦ತೆ ಲಿಖಿತ ಟಿಪ್ಪಣಿಗಳು ಮಾತ್ರವಲ್ಲದೆ, ನಾಲ್ಕು ಧ್ವನಿಮುದ್ರಿಕೆಗಳನ್ನೊಳಗೊ೦ಡ ಒ೦ದು ಧ್ವನಿಸ೦ಪುಟವನ್ನೂ ಸಿದ್ಧಪಡಿಸಿಕೊಟ್ಟರು. (ಇ೦ಥ ಸೀಡಿ ಕನ್ನಡದಲ್ಲಿ ಇದೇ ಮೊದಲು ಬ೦ದದ್ದು ಎ೦ದು ಕೇಳಿದ್ದೇವೆ.) ಒಟ್ಟು ೨೦೦ಕ್ಕೂ ಮೇಲ್ಪಟ್ಟು ಕನ್ನಡಿಗರು ಈ ಶಿಬಿರದಲ್ಲಿ ಪಾಲುಗೊ೦ಡರು. ಸ್ಯಾನ್ ಫ಼್ರಾನ್ಸಿಸ್ಕೋನಲ್ಲಿ ನಡೆದ ಶಿಬಿರ ಒ೦ದರಲ್ಲೇ ೬೩ ಜನ ಭಾಗವಹಿಸಿದ್ದರು. ಇ೦ಥ ಶಿಬಿರಗಳನ್ನು ಮತ್ತೆ ಮತ್ತೆ ನಡೆಸಬೇಕೆ೦ಬ ಕೋರಿಕೆಗಳು ಬರುತ್ತಲೇ ಇವೆ.

ಇ೦ತು ನಮ್ಮ ರ೦ಗದ ಕಾರ್ಯಕಲಾಪಗಳನ್ನು ಇಲ್ಲಿ ನೆಲೆಸಿರುವ ಕನ್ನಡಿಗರ ಔದಾರ್ಯದ ಪೋಷಣೆಯಿಂದಲೇ ನಡೆಸುತ್ತಾಬಂದಿದ್ದೇವೆ ಎಂಬುದು ಗಮನಿಸಬೇಕಾದ ವಿಷಯ. ರಂಗದ ಸದಸ್ಯತ್ವ ಮತ್ತಾವ ಸಂಘ ಸಂಸ್ಥೆಗಳ ಚಟುವಟಿಕೆಗಳೊಂದಿಗೆ ಯಾವ ರೀತಿಯ ವಿರೋಧವನ್ನೂ ತಾಳುವುದಿಲ್ಲ, ಏಕೆಂದರೆ, ರಂಗದ ಧ್ಯೇಯ ಧೋರಣೆಗಳು ಸಂಪೂರ್ಣವಾಗಿ ಸಾಹಿತ್ಯಕ್ಕೇ ಮುಡುಪಾಗಿವೆ ಮತ್ತು ಮತ್ತಾವ ಸಂಸ್ಥೆಯೂ ಇಂಥ ಧ್ಯೇಯ ಧೋರಣೆಗಳನ್ನು ಹೊಂದಿಲ್ಲ. ಇದನ್ನೆಲ್ಲ ನಿರ್ವಹಿಸಲು ಸಮಯ ಬೇಕು, ಶ್ರದ್ಧೆ ಬೇಕು. ಈ ನಿಟ್ಟಿನಲ್ಲಿ ಕಸಾರಂ ನ ಆಡಳಿತ ಮಂಡಲಿಯ ಸದಸ್ಯರು ಮತ್ತು ಕಾರ್ಯಕಾರೀ ಸಮಿತಿಯ ನಿರ್ವಾಹಕರು ಅತ್ಯಂತ ಶ್ರದ್ಧೆ ಮತ್ತು ಉತ್ಸಾಹಗಳಿಂದ ದುಡಿಯುತ್ತಿದ್ದಾರೆ. ಕಸಾರಂ ಸಮ್ಮೇಳನಗಳಲ್ಲಿ ಈ ವರೆಗೆ ಭಾಗವಹಿಸಿರದ ಅಮೆರಿಕದ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಾಹಿತ್ಯಾಭಿಮಾನಿಗಳಿಗೆ ನಮ್ಮ ರಂಗದ ಪರಿಚಯ ಈ ಲೇಖನದ ಮೂಲಕ ಆಗಲೆಂಬುದು ನಮ್ಮ ಆಶಯ. ಈವರೆಗಿನ ನಮ್ಮ ಸಾಧನೆಗಳನ್ನು ಕೆಳಗೆ ಕೊಟ್ಟಿರುವ ಸಾರಾಂಶ ಪಟ್ಟಿಯಲ್ಲಿ ಸ್ಥೂಲರೂಪದಲ್ಲಿ ಭಟ್ಟಿ ಇಳಿಸಿದ್ದೇವೆ, ಪರಾಂಬರಿಸಿ.

ಕನ್ನಡ ಸಾಹಿತ್ಯ ರಂಗದ ಪ್ರಮುಖ ಮೈಲಿಗಲ್ಲುಗಳು

೨೦೧೫: ಕನ್ನಡ ಸಾಹಿತ್ಯ ರಂಗದ ಏಳನೆಯ ವಸಂತ ಸಾಹಿತ್ಯೋತ್ಸವ: ಸೈಂಟ್ ಲೂಯಿಸ್ ನಗರದ ಸಂಗಮ ಕನ್ನಡ ಕೂಟದ ಆಶ್ರಯ ಮತ್ತು ಮಧ್ಯ-ಪಶ್ಚಿಮ ವಲಯದ ಹಲವು ಕನ್ನಡ ಸಂಘಗಳ ಸಹಕಾರದೊಂದಿಗೆ ಅನುವಾದ ಸಾಹಿತ್ಯವನ್ನು ಕುರಿತ ಕಾರ್ಯಕ್ರಮ ಮೇ ೩೦-೩೧ ರಂದು ವಿಜೃಂಭಣೆಯಿಂದ ನೆರವೇರಿತು. ಮೈಸೂರಿನಿಂದ ಖ್ಯಾತ ಅನುವಾದಕ ಪ್ರೊ. ಪ್ರಧಾನ್ ಗುರುದತ್ತರು ಪ್ರಧಾನ ಅತಿಥಿಗಳಾಗಿ ಆಗಮಿಸಿ ಅನುವಾದದ ಆಗು-ಹೋಗುಗಳು ಎಂಬ ವಿದ್ವತ್ಪೂರ್ಣ ಭಾಷಣವನ್ನು ಮಾಡಿದರು. ಪ್ರೊ. ಎಸ್. ಎನ್. ಶ್ರೀಧರ್ ಮತ್ತು ಪ್ರೊ. ನಾರಾಯಣ ಹೆಗ್ಡೆ ವಿಶೇಷ ಅತಿಥಿಗಳಾಗಿ ಬಂದು ಅನುವಾದ ಕಮ್ಮಟದಲ್ಲಿ ಭಾಗವಹಿಸಿದರು. ಅನುವಾದ ಸಂವಾದ ಎಂಬ ಕನ್ನಡ ಪುಸ್ತಕ (ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ, ಕಥೆ, ಕವನ, ಪ್ರಬಂಧ ಮತ್ತು ನಾಟಕಗಳ ಸಂಕಲನ) ಮತ್ತು ಆ ಳಿತ್ತ್ಲೆ ಟಸ್ತೆ ಒಫ಼್ ಖನ್ನದ ಇನ್ ಏನ್ಗ್ಲಿಶ್ ಎಂಬ ಇಂಗ್ಲೀಷ್ ಪುಸ್ತಕ (ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ ಕಥೆ, ಕವನ ಮತ್ತು ಪ್ರಬಂಧಗಳ ಸಂಕಲನ) ಶ್ರೀಕಾಂತ ಬಾಬು ಅವರ ಸಂಪಾದಕತ್ವದಲ್ಲಿ ಲೋಕಾರ್ಪಣೆಗೊಂಡವು. ಆಂಗ್ಲ ಭಾಷೆಯಲ್ಲಿ ಪುಸ್ತಕವೊಂದನ್ನು ರಂಗ ಹೊರತರುತ್ತಿರುವುದು ಇದೇ ಮೊದಲು. ಈ ಪುಸ್ತಕಗಳು ಮೊದಲ ಬಾರಿಗೆ ಅಮೆಜಾನ್ ಮೂಲಕ ಲಭ್ಯವಾಗಿವೆ. ನಾಗ ಐತಾಳ ಮತ್ತು ಜ್ಯೋತಿ ಮಹಾದೇವ್ ಸಂಪಾದಿಸಿರುವ ಅಮೆರಿಕನ್ನಡ ಬರಹಗಾರರ ಸಂಕ್ಷಿಪ್ತ ಮಾಹಿತಿ ಕೋಶ ಎಂಬ ಉಪಯುಕ್ತ ಪುಸ್ತಕವು ಕೂಡ ಲೋಕಾರ್ಪಣೆಗೊಂಡಿದ್ದು ಏಳನೆಯ ವಸಂತ ಸಾಹಿತ್ಯೋತ್ಸವದ ಹಿರಿಮೆಗಳಲ್ಲೊಂದು.

೨೦೧೩: ಕನ್ನಡ ಸಾಹಿತ್ಯ ರಂಗ ಮೊದಲ ದಶಕವನ್ನು ತಲುಪಿದ ಸಂಭ್ರಮ, ಹ್ಯೂಸ್ಟನ್ ಕನ್ನಡವೃಂದದ ಸಹಯೋಗದಲ್ಲಿ ಮತ್ತು ಟೆಕ್ಸಸ್ ಪ್ರಾಂತ್ಯದ ಇತರ ಕನ್ನಡ ಸಂಘಗಳಾದ ಡಲ್ಲಾಸಿನ ಮಲ್ಲಿಗೆ ಕನ್ನಡ ಸಂಘ, ಸ್ಯಾನ್ ಆಂಟೋನಿಯಾದ ಕುವೆಂಪು ಕನ್ನಡ ಸಂಘ, ರಿಯೋ ಗ್ರ್ಯಾಂಡಿ ಕಣಿವೆಯ ಕನ್ನಡ ಸಂಘ ಮತ್ತು ಆಸ್ಟಿನ್ ಕನ್ನಡ ಸಂಘಗಳ ಸಹಕಾರದೊಂದಿಗೆ ರೈಸ್ ಯೂನಿವರ್ಸಿಟಿ ಪ್ರಾಂಗಣದಲ್ಲಿ ಆರನೇ ವಸಂತ ಸಾಹಿತ್ಯೋತ್ಸವ. ಪ್ರಖ್ಯಾತ ಕವಿ ಮತ್ತು ಬರಹಗಾರ ಪ್ರೊ|| ಕೆ.ವಿ ತಿರುಮಲೇಶ್ ಅವರು ಮುಖ್ಯ ಅತಿಥಿಗಳು, ಮುಖ್ಯ ಅತಿಥಿಗಳ ಭಾಷಣದ ವಿಷಯ ಕನ್ನಡದ ಮುನ್ನಡೆ: ಸವಾಲುಗಳು ಮತ್ತು ಅವಕಾಶಗಳು. ಸಮಾಜ ಶಾಸ್ತ್ರಜ್ಞ, ಪ್ರೊ. ಶ್ರೀಪತಿ ತಂತ್ರಿ, ಕನ್ನಡ ಭಾಷಾಶಾಸ್ತ್ರಜ್ಞ ಪ್ರೊ. ಎಸ್.ಎನ್. ಶ್ರೀಧರ್ ಮತ್ತು ಮೈಸೂರಿನ ಧ್ವನ್ಯಾಲೋಕದ ಪ್ರೊ. ಸಿ. ಎನ್. ಶ್ರೀನಾಥ್ ಇತರ ಆಹ್ವಾನಿತ ಅತಿಥಿಗಳು. ಹ್ಯೂಸ್ಟನ್ ಕನ್ನಡವೃಂದ ಯೋಜಿಸಿದ, ಜಗದ್ವಿಖ್ಯಾತ (ದಿವಂಗತ) ರಾಜಾರಾಯರ ಇನ್ನೂ ಕರಡಿನಲ್ಲಿದ್ದ ಆಂಗ್ಲ ಕಾದಂಬರಿಯ ಕನ್ನಡ ರೂಪಾಂತರ, ನಾರೀಗೀತದ ಲೋಕಾರ್ಪಣೆ ಮತ್ತು ಅದರ ವೈಶಿಷ್ಟ್ಯಗಳ ಚರ್ಚೆ. ಅಮೆರಿಕದಲ್ಲಿ ನೆನೆಸಿರುವ ಕನ್ನಡಿಗರ ಜೀವನ ಮತ್ತು ವೃತ್ತಿ ಅನುಭವಗಳನ್ನು ಸೆರೆಹಿಡಿಯುವ ಪ್ರಬಂಧಗಳನ್ನೊಳಗೊಂಡ ಅಮೂಲ್ಯ ಪುಸ್ತಕ ಬೇರು-ಸೂರು, ಅಮೆರಿಕದಲ್ಲಿ ನಮ್ಮ ಬದುಕು ಪ್ರಕಟಣೆ (ಸಂಪಾದಕರು: ಗುರುಪ್ರಸಾದ್ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್ ಮತ್ತು ಜ್ಯೋತಿ ಮಹಾದೇವ್).

೨೦೧೨: ಖ್ಶ್-ಭೂಕ್ ಛ್ಲುಬ್ ಸ್ಥಾಪನೆ. ತಿ೦ಗಳಿಗೊಮ್ಮೆ ದೂರವಾಣಿಯ ಮೂಲಕ ನಡೆಯುವ ಈ ಕಿರು ಸಂಕಿರಣದಲ್ಲಿ ಯಾವುದಾದರೂ ಒ೦ದು ಉತ್ತಮವಾದ ಕತೆ ಅಥವ ಇತರ ಸಾಹಿತ್ಯ ರಚನೆಯನ್ನು ಕುರಿತು ಸದಸ್ಯರು ಚರ್ಚಿಸುತ್ತಾರೆ. ದೇಶದ ಒಳಗೆ ಮತ್ತು ಹೊರಗೆ ಇರುವ ಆಸಕ್ತ ಸದಸ್ಯರೆಲ್ಲ ಸೇರಿ ನಡೆಸುವ ಈ ಚರ್ಚೆ ಬಹಳ ವಿಚಾರಶೀಲವೂ ಉಪಯುಕ್ತವೂ ಆಗಿದೆ. ಪ್ರತಿ ತಿಂಗಳೂ ನಡೆಯುವ ರಂಗದ ಈ ಕಾರ್ಯಕ್ರಮದಲ್ಲಿ ಕೇಳುಗರಾಗಿ ಅಥವಾ ಪ್ರಸ್ತುತ ಪಡಿಸುವವರಾಗಿ ಮತ್ತು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರಾಗಿ ಭಾಗವಹಿಸಲು ಅವಕಾಶವಿದೆ. ಈ ಬಗ್ಗೆ ರಂಗದ ಪದಾಧಿಕಾರಿಗಳನ್ನು ಸಂಪರ್ಕಿಸಿ.

೨೦೧೧: ಐದನೇ ವಸ೦ತ ಸಾಹಿತ್ಯೋತ್ಸವ, ಏಪ್ರಿಲ್ ೩೦-ಮೇ ೧, ಕ್ಯಾಲಿಫ಼ೋರ್ನಿಯಾ ಕೊಲ್ಲಿ ಪ್ರದೇಶದ ವುಡ್ಸೈಡ್ ಎಂಬ ಊರಿನಲ್ಲಿ; ಸಹಯೋಗ: ಕ್ಯಾಲಿಫ಼ೊರ್ನಿಯಾ ಕನ್ನಡ ಕೂಟ; ಸಹಕಾರ: ಸಾಹಿತ್ಯ ಗೋಷ್ಠಿ; ಮುಖ್ಯ ವಸ್ತು: ಕನ್ನಡ ಪ್ರಬಂಧ; ಮುಖ್ಯ ಅತಿಥಿ: ಡಾ. ಸುಮತೀ೦ದ್ರ ನಾಡಿಗ; ಪ್ರಮುಖ ಭಾಷಣದ ಶೀರ್ಷಿಕೆ: ಕನ್ನಡ ಸಾಹಿತ್ಯದಲ್ಲಿ ಪ್ರಬ೦ಧ ಪ್ರಕಾರ; ವಿಶೇಷ ಅತಿಥಿ: ಭುವನೇಶ್ವರಿ ಹೆಗಡೆ; ಭಾಷಣ: ಹಾಸ್ಯ ಲೇಖಕಿಯಾಗಿ ನನ್ನ ಅನುಭವಗಳು; ಪ್ರಕಟವಾದ ಪುಸ್ತಕ: ಮಥಿಸಿದಷ್ಟೂ ಮಾತು (ಸ೦ಪಾದಕರು: ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಎ೦.ಆರ್. ದತ್ತಾತ್ರಿ)

೨೦೦೯: ನಾಲ್ಕನೆಯ ವಸಂತ ಸಾಹಿತ್ಯೋತ್ಸವ, ಮೇ ೩೦-೩೧, ಬಾಲ್ಟಿಮೋರ್-ವಾಷಿಂಗ್ಟನ್ ನಡುವಿನ ರಾಕ್ವಿಲ್, ಮೇರಿಲೆಂಡ್ನಲ್ಲಿರುವ ಊನಿವೆರ್ಸಿತಿಎಸ್ ಒಫ಼್ ಂಅರ್ಯ್ಲನ್ದ್ ಅತ್ ಷದ್ಯ್ಗ್ರೊವೆ ನಲ್ಲಿ. ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ನಡೆದ ಈ ಉತ್ಸವಕ್ಕೆ ಮುಖ್ಯ ವಸ್ತು: ಕನ್ನಡ ಕಾದಂಬರಿ; ಮುಖ್ಯ ಅತಿಥಿ: ಡಾ. ವೀಣಾ ಶಾಂತೇಶ್ವರ; ಭಾಷಣದ ಶೀರ್ಷಿಕೆ: “ಕನ್ನಡ ಕಾದಂಬರಿ – ಕಳೆದ ಕಾಲು ಶತಮಾನದಲ್ಲಿ;” ವಿಶೇಷ ಅತಿಥಿ ವೈದೇಹಿಯವರಿಂದ ಸ್ವಂತ ಕತೆಗಳ ವಾಚನ ಮತ್ತು ಅವರೊಂದಿಗೆ ಸಂವಾದ; ಪ್ರಕಟವಾದ ಪುಸ್ತಕ: “ಕನ್ನಡ ಕಾದಂಬರಿ ಲೋಕದಲ್ಲಿ…ಹೀಗೆ ಹಲವು…” (ಸಂಪಾದಕರು: ಮೈ.ಶ್ರೀ. ನಟರಾಜ).

೨೦೦೮: ಆಡಳಿತ ಮಂಡಲಿಯ ಪುನಾರಚನೆ ಮತ್ತು ಚುನಾವಣೆ; ಕಾರ್ಯಕಾರೀ ಸಮಿತಿಯ ಚುನಾವಣೆ.

೨೦೦೭: ಮೂರನೆಯ ವಸಂತ ಸಾಹಿತ್ಯೋತ್ಸವ, ಮೇ ೧೯-೨೦, ಚಿಕಾಗೋ ಬಳಿಯ ಅರೋರ, ಇಲಿನಾಯ್ನಲ್ಲಿನ ಶ್ರೀ ಬಾಲಾಜಿ ದೇವಾಲಯದಲ್ಲಿ. ಸಹಪ್ರವರ್ತಕರು: ವಿದ್ಯಾರಣ್ಯ ಕನ್ನಡ ಕೂಟ; ಮುಖ್ಯ ವಸ್ತು: ಕನ್ನಡ ಸಾಹಿತ್ಯದಲ್ಲಿ ಹಾಸ್ಯ; ಮುಖ್ಯ ಅತಿಥಿ: ಪ್ರೊ. ಅ.ರಾ. ಮಿತ್ರ; ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ;” ವಿಶೇಷ ಅತಿಥಿ: ಡಾ. ಎಚ್.ಎಸ್. ರಾಘವೇಂದ್ರ ರಾವ್; ಮುಖ್ಯ ಅತಿಥಿಗಳ ಭಾಷಣದ ಶೀರ್ಷಿಕೆ: “ಅಮೆರಿಕಾದ ಕನ್ನಡಿಗರ ಸಾಹಿತ್ಯ ಸೃಷ್ಟಿ – ಕೆಲವು ಅನಿಸಿಕೆಗಳು;” ಪ್ರಕಟವಾದ ಪುಸ್ತಕ: “ನಗೆಗನ್ನಡಂ ಗೆಲ್ಗೆ!” (ಸಂಪಾದಕರು: ಎಚ್.ಕೆ. ನಂಜುಂಡಸ್ವಾಮಿ ಮತ್ತು ಎಚ್.ವೈ. ರಾಜಗೋಪಾಲ್). ಲಾಸ್ ಏಂಜಲಿಸ್ನ “ಅಂಜಲಿ” ಪ್ರಕಟಿಸಿದ “ಕನ್ನಡದಮರ ಚೇತನ (ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಹಿತ್ಯ ಸಮೀಕ್ಷೆ)” ಯೋಜನೆಯಲ್ಲಿ ಆರ್ಥಿಕ ಸಹಾಯ; ಅಮೆರಿಕದ ಈನ್ತೆರ್ನಲ್ ಎವೆನುಎ ಶೆರ್ವಿಚೆ (ಈಶ್) ನಿಂದ ಆದಾಯ ತೆರಿಗೆ ವಿನಾಯಿತಿ ಅನುದಾನ; ರಂಗದ ಅಂತರ್ಜಾಲ ತಾಣದ ಉದ್ಘಾಟನೆ .

೨೦೦೬: ಕನ್ನಡ ಸಾಹಿತ್ಯ ಶಿಬಿರ – ಅಮೆರಿಕದ ಒಂಬತ್ತು ನಗರಗಳಲ್ಲಿ ಜೂನ್-ಆಗಸ್ಟ್ ಕಾಲಾವಧಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಎರಡು ದಿನಗಳ ಕ್ರಮಬದ್ಧ ಅಭ್ಯಾಸ ಶಿಬಿರ; ಅಮೆರಿಕದಲ್ಲಿ ಈ ಪ್ರಮಾಣದಲ್ಲಿ ನಡೆದ ಮೊಟ್ಟಮೊದಲ ಶಿಬಿರ. ಉಪನ್ಯಾಸಕರು: ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ; ಉಪನ್ಯಾಸದ ಟಿಪ್ಪಣಿಗಳು, ೪ ಧ್ವನಿಸಂಪುಟಗಳ ಹಂಚಿಕೆ.

೨೦೦೫: ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ ತ್ರಿವೇಣಿ ನಡೆಸಿದ ಪುತಿನ ಜನ್ಮ ಶತಮಾನೋತ್ಸವದಲ್ಲಿ ಸಹಪ್ರವರ್ತನ, ಜೂನ್ ೧೮. ಎರಡನೆಯ ವಸಂತ ಸಾಹಿತ್ಯೋತ್ಸವ, ಡಿಸೆಂಬರ್ ೫, ಲಾಸ್ ಏಂಜಲಿಸ್ ಬಳಿಯ ಲೇಕ್ವುಡ್ ಎಂಬ ಊರಿನ ಹೂವರ್ ಹರ್ಬರ್ಟ್ ಮಾಧ್ಯಮಿಕ ಶಾಲೆಯಲ್ಲಿ. ಸಹಪ್ರವರ್ತಕರು: ಕರ್ನಾಟಕ ಸಾಂಸ್ಕೃತಿಕ ಸಂಘ – ದಕ್ಷಿಣ ಕ್ಯಾಲಿಫ಼ೋರ್ನಿಯ; ಕಸ್ತೂರಿ ಕನ್ನಡ ಸಂಘ – ಸ್ಯಾನ್ ಡಿಯೇಗೋ; ಮತ್ತು “ಅಂಜಲಿ” – ಲಾಸ್ ಏಂಜಲಿಸ್; ಮುಖ್ಯ ವಸ್ತು: ಕನ್ನಡ ಸಾಹಿತ್ಯದಲ್ಲಿ ಸೃಜನಶೀಲತೆ; ಮುಖ್ಯ ಅತಿಥಿ: ಪ್ರೊ. ಬರಗೂರು ರಾಮಚಂದ್ರಪ್ಪ; ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯ ಮತ್ತು ಸೃಜನಶೀಲ ಸ್ವಾತಂತ್ರ್ಯ;” ಪ್ರಕಟವಾದ ಪುಸ್ತಕ: “ಆಚೀಚೆಯ ಕತೆಗಳು” (ಪ್ರಧಾನ ಸಂಪಾದಕ: ಗುರುಪ್ರಸಾದ ಕಾಗಿನೆಲೆ).

೨೦೦೪: ನ್ಯೂ ಜೆರ್ಸಿ ರಾಜ್ಯದಲ್ಲಿ ಕನ್ನಡ ಸಾಹಿತ್ಯ ರಂಗದ ದಾಖಲೆ, ಆರ್ಥಿಕ ಲಾಭೋದ್ದೇಶವಿಲ್ಲದ ಸಾಂಸ್ಕೃತಿಕ, ಶೈಕ್ಷಣಿಕ ಸಂಸ್ಥೆ ಎಂಬ ಅಧಿಕೃತ ಅಭಿದಾನ. ಮೇ ೨೯, ಮೊಟ್ಟಮೊದಲ ವಸಂತ ಸಾಹಿತ್ಯೋತ್ಸವ, ಫಿಲಡೆಲ್ಫಿಯಾ ಬಳಿಯ ವಿಲನೋವ ವಿಶ್ವವಿದ್ಯಾಲಯದಲ್ಲಿ. ಸಹಪ್ರವರ್ತಕರು: ವಿಲನೋವ ವಿಶ್ವವಿದ್ಯಾಲಯದ ಪ್ರಾಚೀನ ಮತ್ತು ಅಧುನಿಕ ಭಾಷಾ ಸಾಹಿತ್ಯಗಳ ವಿಭಾಗ; ಸಹಕಾರ: ತ್ರಿವೇಣಿ (ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ); ಮುಖ್ಯ ವಸ್ತು: ಕುವೆಂಪು ಜನ್ಮ ಶತಮಾನೋತ್ಸವ; ಮುಖ್ಯ ಅತಿಥಿ: ಡಾ. ಪ್ರಭುಶಂಕರ; ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯ — ಒಂದು ಮಿಂಚು ನೋಟ;” ಪ್ರಕಟವಾದ ಪುಸ್ತಕ: “ಕುವೆಂಪು ಸಾಹಿತ್ಯ ಸಮೀಕ್ಷೆ” (ಪ್ರಧಾನ ಸಂಪಾದಕ: ನಾಗ ಐತಾಳ).

೨೦೦೩: ಕನ್ನಡ ಸಾಹಿತ್ಯ ರಂಗದ ಪರಿಕಲ್ಪನೆ ಹಾಗು ರಂಗದ ಆಶಯ ಮತ್ತು ಧ್ಯೇಯೋದ್ದೇಶಗಳ ಅಂಕುರಾರ್ಪಣೆ.

ಮುಕ್ತಾಯ: ಅಮೆರಿಕದಲ್ಲಿ ನೆಲೆಸಿರುವ ಕನ್ನಡ ಸಾಹಿತ್ಯಾಸಕ್ತರನ್ನು ರಂಗ ಆದರದಿಂದ ಸ್ವಾಗತಿಸುತ್ತದೆ. ರಂಗದ ಸಂವಿಧಾನದ ಪ್ರಕಾರ ಸದಸ್ಯತ್ವ ಆಹ್ವಾನದ ಮೂಲಕ ನಡೆಯುತ್ತದೆ. ಸದಸ್ಯತ್ವ ಪಡೆದವರು ಸ್ವಯಂಸೇವಕರಾಗಿ ದುಡಿದು ಕಾರ್ಯಕಾರೀ ಸಮಿತಿಯಲ್ಲಿ ಮತ್ತು ಆಡಳಿತ ಮಂಡಲಿಗೆ ಚುನಾಯಿತರಾಗಲು ಹೇರಳವಾದ ಅವಕಾಶಗಳಿವೆ. ರಂಗ ಪ್ರಕಟಿಸುವ ಪುಸ್ತಕಗಳಲ್ಲಿ ತಮ್ಮ ಲೇಖನಗಳಿಗೆ ಸ್ವಾಗತವಿದೆ, ಅಷ್ಟೇ ಅಲ್ಲ, ರಂಗದ ಸಂಪಾದಕೀಯ ಸಮಿತಿಯ ಸದಸ್ಯರಾಗಲೂ ಅವಕಾಶಗಳಿವೆ. ನೀವು ಸದಸ್ಯರಾಗಲು ಬಯಸದಿದ್ದಲ್ಲಿ ಸಹ ರಂಗದ ಚಟುವಟಿಕೆಗಳಿಗೆ ನೀವು ಹಲವು ರೀತಿಯಲ್ಲಿ ನಿಮ್ಮ ಉತ್ತೇಜನ ಮತ್ತು ಸಹಕಾರಗಳನ್ನು ತೋರಬಹುದು. ಸದಸ್ಯರಾಗಲು ಇಚ್ಛೆಯಿದ್ದಲ್ಲಿ ನಿಮ್ಮ ಬಯಕೆಯನ್ನು ರಂಗದ ಸದಸ್ಯರಿಗೆ ತಿಳಿಸಿದರೆ ನಿಮಗೆ ಆಹ್ವಾನ ಕೊಡಲಾಗುವುದು, ರಂಗದ ಪ್ರಕಟಣೆಗಳನ್ನು ಕೊಂಡು ಓದಲು, ರಂಗ ನಡೆಸುವ ವಸಂತ ಸಾಹಿತ್ಯೋತ್ಸವಗಳಲ್ಲಿ ಭಾಗವಹಿಸಲು, ಹಾಗು ಪ್ರತಿ ತಿಂಗಳೂ ನಡೆಯುವ ಪುಸ್ತಕ-ಕೂಟದ ಚರ್ಚೆಗಳಲ್ಲಿ ಭಾಗವಹಿಸಲು ನೀವು ಸದಸ್ಯರಾಗಬೇಕಿಲ್ಲ, ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿದ್ದರೆ ಸಾಕು. ಜೊತೆಗೆ, ಉಳ್ಳ ಉದಾರಿಗಳು ನಮಗೆ ಧನಸಹಾಯಮಾಡಬಹುದು (ರಂಗ ಲಾಭರಹಿತ ಸಂಸ್ಥೆಯಾದ್ದರಿಂದ, ತಮ್ಮ ಕೊಡುಗೆ ಆದಾಯ ತೆರಿಗೆಯಿಂದ ವಿನಾಯತಿಗೆ ಅರ್ಹವಾಗುತ್ತದೆ ಎಂಬುದನ್ನು ತಾವು ದಯವಿಟ್ಟು ಗಮನಿಸಬೇಕು!) ನಮ್ಮ ಪ್ರಕಟನೆಗಳನ್ನು ಅಭಿನವ ಮತ್ತು ವಸ೦ತ ಪ್ರಕಾಶನ, ಬೆ೦ಗಳೂರು, ಅವರಿ೦ದ ಪಡೆಯಬಹುದು. ಕನ್ನಡ ಸಾಹಿತ್ಯ ರಂಗದ ಮುಂದಿನ ಕಾರ್ಯಕ್ರಮಗಳನ್ನು ನಿಮ್ಮೂರಿಗೆ ಕರೆಸಿಕೊಳ್ಳಲು ನಿಮಗೆ ಬಯಕೆಯಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ, ಕನ್ನಡ ಸಾಹಿತ್ಯ ರಂಗದ ಹೆಚ್ಚಿನ ಚಟುವಟಿಕೆಗಳ ಮಾಹಿತಿ ಪಡೆಯಲು ನಮ್ಮ ಜಾಲತಾಣಕ್ಕೆ ತಪ್ಪದೇ ಭೇಟಿ ಕೊಡಿ (ವ್ವ್ವ್.ಕನ್ನದಸಹಿತ್ಯರನ್ಗ.ಒರ್ಗ್).

ಸಿರಿಗನ್ನಡ ಗೆಲ್ಗೆ.

 Posted by at 10:00 AM
May 122015
 

KANNADA SAHITYA RANGA, INC.

What it stands for and what it has achieved so far

 

Kannada Sahitya Ranga is a national organization devoted entirely to the pursuit of Kannada literature. Its mission is to preserve and promote an active interest in Kannada literature among Kannadigas living in this country; to encourage them to write in Kannada giving expression to the thoughts and experiences accumulated over time, particularly in the cross-cultural milieu of the land of their adoption; and to provide a platform and an outlet for such literary endeavors. This it aims to achieve through frequent conferences that bring together literary enthusiasts from all over the country, publication of anthologies containing the writings of local Kannadigas, and similar related efforts.

 

Established in 2003, Kannada Sahitya Ranga has in a short time become a well recognized organization, noted for the quality of its programs and publications. Most American Kannada writers have written for one or the other of its books, many for the first time. It has been registered as a non-profit charitable cultural organization in New Jersey and is granted tax-exempt status by the IRS (Federal Tax EIN 20-0939357).

 

What it has done so far…

 

Conferences, Speakers and Publications: Starting in 2004, Kannada Sahitya Ranga has so far held five conferences in different parts of the country. The 6th conference is being held in Houston, Texas, in co-sponsorship with Kannada Vrinda, supported by several other Kannada organizations of Texas – Austin Kannada Koota, San Antonio Kuvempu Kannada Koota, Mallige Kannada Koota of Dallas, and Rio Grande Valley Kannada Koota. Conferences are held every other spring (odd years). At each conference we have a chief guest invited from Karnataka who delivers a keynote address on an important topic related to the development of Kannada literature. Other Special Guests are also invited. Also, a book is published containing the writings of various American Kannada authors. Some details are given below:

 

2013 – 6th Vasantha Sahityotsava and tenth anniversary of Kannada Sahitya Ranga at Rice University, Houston, TX, cosponsored by Houston Kannada Vrinda, with the cooperation of Mallige Kannada Association, Dallas; Austin Kannada Sangha; Kuvempu Kannada Koota, San Antonio; and Rio Grande Valley Kannada Koota.

Coference Theme: American Experience of  Kannadigas.

Chief Guest: K.V.Tirumalesh

Keynote Address: Progress in Kannada, Challenges and Opportunities for Kannada.

Special Guests: S.N.Sridhar and C.N.Srinath.

Publication: ‘Beru-Sooru’ (Anthology of first person articles depicting American experience);* Ed.: Guruprasad Kaginele, Triveni Shreenivasa Rao, and Jyothi Mahadev).

 

2011 – 5th Vasantha Sahityotsava at Woodside, California (San Francisco Bay Area), cosponsored by North California Kannada Koota, supported by Sahitya Goshthi.

Conference Theme: Essay in Kannada Literature

Chief Guest: Dr. Sumateendra Nadig, noted poet, critic, essayist

Keynote Address: The ‘Essay’ in Kannada Literature.

Special Guest: Bhuvaneshwari Hegde, humorist, writer

Publication: ‘Mathisidashtoo Matu’ (anthology of essays), Ed.: Triveni Srinivasa Rao and M.R. Dattatri

 

2009 – 4th Vasantha Sahityotsava at Universities of Maryland, Rockville, MD, May 20-31, cosponsored by Kaveri Kannada Sangha.

Conference Theme: Kannada novel

Chief Guest: Dr. Veena Shanteshwara, novelist, short story writer

Keynote Address: Kannada Novel in the last quarter century*

Special guest: Vaidehi, short story writer, poet

Publication: ‘Kannada kadambari lokadalli…heege halavu…’ Ed. M.S. Nataraja

 

2007 – 3rd Vasantha Sahityotsava at Balaji Temple, Aurora, IL, May 19-20, cosponsored by Vidyaranya Kannada Koota.

Conference theme: Humor in Kannada Literature

Chief Guest: Prof. A.R. Mitra, scholar, writer, humorist

Keynote address: Humor in Kannada Literature*

Special guest: Dr. H.S. Raghavendra Rao, scholar, critic

Publication: ‘Nageganadam Gelge!’ Eds. H.K. Nanjundaswamy and H.Y. Rajagopal

 

2005 – 2nd Vasantha Sahityotsava at Hoover Herbert Middle School, Lakewood, CA, December 5, 2005, cosponsored by Karnataka Cultural Association, Southern California and supported by  Kasturi Kannada Sangha, San Diego; ‘Anjali,’ Los Angeles

Conference theme: Creative writing in Kannada

Chief Guest: Prof. Baraguru Ramachandrappa, scholar, critic, film maker

Keynote address: Kannada literature and creative freedom*

Publication: ‘Acheecheya Kathegalu,’ Ed. Guruprasad Kaginele

 

2004 – 1st Vasantha Sahityotsava at Villanova University, Villanova, PA, May 29, 2004, cosponsored by the Department of Classical and Modern Languages and Literatures, Villanova University and supported by Triveni, the Kannada Association of Pennsylvania, New Jersey and Delaware.

Conference theme: Kuvempu centenary celebration

Chief Guest: Dr. Prabhushankara, scholar, poet, critic

Keynote address: Kannada literature: a bird’s eye view*

Publication: ‘Kuvempu Sahitya Samikshe,’ Ed. Naga Aithal

 

*All keynote addresses have been separately printed.

 

Kannada Literature workshop

 

In 2006, Kannada Sahitya Ranga conducted a 2-day workshop on the development of Kannada literature from the age of stone edicts to Navodaya, the age of modern literature. The workshop was held in nine major locations in US and was conducted by Dr. N.S. Lakshminarayana Bhatta, noted poet and scholar.  In addition to lecture notes, a 4-volume set of CDs was provided to the participants.

 

Appeal

 

Kannada Sahitya Ranga functions entirely by voluntary effort, with no overhead costs at all; its activities are funded by generous donations by literary enthusiasts and supporters. We appeal to all of you to support this cause. We also appeal to you to purchase our books which are available here and in bookstores in Bangalore.

 

We welcome you to join us in this great endeavor. American Kannadigas can make a great contribution to Kannada literature.

 

 

 Posted by at 10:52 AM