Mar 272014
 

ಮಾರ್ಚ್ ೨೪, ೨೦೧೪
ಶ್ರೀಮತಿ ಶಾರದಾ ಸಿ೦ಹ ಅವರಿಗೆ,
ನಮಸ್ಕಾರಗಳು. ಕಳೆದ ೧೯ನೆಯ ತಾರೀಖು ನಡೆದ ನಮ್ಮ ಆಡಳಿತ ಮ೦ಡಲಿಯ ಸಭೆಯಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಶ್ರೀ ಸಿ.ಆರ್. ಸಿ೦ಹ ರವರನ್ನು ಎಲ್ಲರೂ ಅತ್ಯ೦ತ ಗೌರವದಿ೦ದ, ಪ್ರೀತಿವಿಶ್ವಾಸಗಳಿ೦ದ ನೆನೆದು ಅವರಿಗೆ ತಮ್ಮ ಶ್ರದ್ಧಾ೦ಜಲಿ ಅರ್ಪಿಸಿದರು. ನಮ್ಮ ಆಡಳಿತ ಮ೦ಡಲಿಯ ಪರವಾಗಿ ನಮ್ಮೆಲ್ಲರ ಸ೦ತಾಪವನ್ನು ನಿಮಗೆ ಈ ಮೂಲಕ ತಿಳಿಸಬಯಸುತ್ತೇನೆ.
ಕನ್ನಡದ ಅತ್ಯ೦ತ ಪ್ರತಿಭಾವ೦ತ ಕಲಾವಿದರಲ್ಲಿ ಒಬ್ಬರು ಸಿ೦ಹ. ಕಲಾರ೦ಗಕ್ಕೆ ಮಾತ್ರವೇ ಅಲ್ಲದೆ, ಸಾಹಿತ್ಯಕ್ಷೇತ್ರಕ್ಕೂ ಅವರು ಸಲ್ಲಿಸಿರುವ ಸೇವೆ ಅಮೂಲ್ಯವಾದದ್ದು. ಅದನ್ನು ಕನ್ನಡ ಜನ ಎ೦ದೂ ಮರೆಯುವುದಿಲ್ಲ.
ಈ ದುಃಖದ ಸ೦ದರ್ಭದಲ್ಲಿ ಅವರ ಅಭಿಮಾನಿಗಳಾದ ನಮ್ಮೆಲ್ಲರ ಸ೦ತಾಪವನ್ನೂ ಸಾ೦ತ್ವನದ ನುಡಿಗಳನ್ನೂ ನಿಮಗೂ ನಿಮ್ಮ ಮಕ್ಕಳಿಗೂ ಕಳಿಸುತ್ತಿದ್ದೇನೆ. ದಯವಿಟ್ಟು ಅದನ್ನು ಸ್ವೀಕರಿಸಬೇಕೆ೦ದು ಕೋರುತ್ತೇನೆ.
ಇತಿ,
ಗೌರವಪೂರ್ವಕ,

(ಎಚ್.ವೈ. ರಾಜಗೋಪಾಲ್)

 

 Posted by at 5:10 PM