May 212013
 

ಕನ್ನಡ ಸಾಹಿತ್ಯ ರಂಗದ ದಶಮಾನೋತ್ಸವಕ್ಕೆ ಇದಕ್ಕಿಂತ ಹೆಚ್ಚಿನ ಉಡುಗೊರೆ ಬೇರೊಂದಿಲ್ಲ!

 

ಸಾಹಿತ್ಯ ರಂಗದ ದಶಮಾನೋತ್ಸವದ ಆಚರಣೆಗೆ ಇದಕ್ಕಿಂತ ಹೆಚ್ಚಿನ ಉಡುಗೊರೆ ಬೇರೊಂದಿಲ್ಲ.. ಹ್ಯೂಸ್ಟನ್ ಕನ್ನಡ ವೃಂದದವರ ಈ ದಶಮಾನೋತ್ಸವದ ಕೊಡುಗೆ ಎಂದೂ ಮರೆಯಲು ಸಾಧ್ಯವಿಲ್ಲ. ಆದಿಯಿಂದ ಕಡೆಯವರೆಗೂ ಒಂದೂ ಕಪ್ಪು ಛಾಯೆಗಳೇ ಇಲ್ಲದಂತ ಈ ಸಮಾವೇಶ ಬಹುಶಃ ಈ 6 ವಸಂತ ಸಾಹಿತ್ಯೋತ್ಸಗಳಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ.

ವಸಂತೋತ್ಸವ ಇದ್ದಿದ್ದು ಮೇ 18 (ಶನಿವಾರ) ಹಾಗೂ 19 (ಭಾನುವಾರ) ಆದರೂ, ನಿಜವಾದ ಉತ್ಸವ ಶುಕ್ರವಾರವೇ ಪ್ರಾರಂಭವಾಗಿತ್ತು. ಸಾಹಿತ್ಯೋತ್ಸವ ವಿಜ್ರಂಭಣೆಯಿಂದ ನಡೆಯುತ್ತದೆ ಎನ್ನುವ ಸುಳಿವು ಶುಕ್ರವಾರ ಸಂಜೆ ನಡೆದ ಗೆಜ್ಜೆಪೂಜೆಯಲ್ಲೇ ಸಿಕ್ಕಿತ್ತು. ವಸಂತೋತ್ಸವಕ್ಕೆ ವೃಂದದ ನಡೆಸಿದ್ದ ತಾಲೀಮು ಇದನ್ನು ಸಾದರ ಪಡಿಸಿತ್ತು. ಭೋಜನದಿಂದ ಹಿಡಿದು ಉತ್ಸವಕ್ಕೆ ಬೇಕಾದ ಎಲ್ಲ ಕಾರ್ಯಗಳ ತಾಲೀಮನ್ನು ವೃಂದ ನಡೆಸಿತ್ತು. 200ಕ್ಕೂ ಹೆಚ್ಚು ನೋಂದಣಿಗಾರರನ್ನು ಸ್ವಾಗತಿಸಲು ಸಜ್ಜಾಗಿದ್ದರು ವೃಂದದ ಸ್ವಯಂ ಸೇವಕರು. ಹ್ಯೂಸ್ಟನ್ ಶೆಕೆಯಲ್ಲೂ ಬೆವರು ಸುರಿಸುತ್ತಾ ಬೆಳಗಿನಿಂದಲೂ ಕಷ್ಟ ಪಟ್ಟು ಕೆಲಸಮಾಡಿ ದುಡಿಯುತ್ತಿದ್ದುದು ಕಾಣ ಬರುತ್ತಿತ್ತು. ರಾತ್ರಿಯ ಊಟವೂ ಸೊಗಸಾಗಿತ್ತು..

 

KSR_WEB-289

 

ವಸಂತ ಸಾಹಿತ್ಯೋತ್ಸವದ ವಿಶೇಷವೆಂದರೆ ಪ್ರತಿ ಕಾರ್ಯಕ್ರಮವೂ ಪ್ರಕಟಿಸಿದ ವೇಳೆಗೆ ಪ್ರಾರಂಭವಾಗಿ ಪ್ರಕಟಿಸಿದ ಕಾಲದಲ್ಲೇ ಮುಗಿಯುವುದು. ಅದರ ಶುಭಾರಂಭವಾಗುವುದೇ ಸಮಾವೇಶದ ಮೊದಲ ದಿವಸ. ಪ್ರಾರಂಭ ಕರಾರುವಾಕ್ಕಾಗಿ ಆದರೆ ಮುಂದಿನ ಕಾರ್ಯಕ್ರಮಗಳು ಸುಲಲಿತವಾಗಿ ನಡೆದುಕೊಂಡು ಹೋಗುತ್ತದೆ. ಅದರಂತೆ ಹ್ಯೂಸ್ಟನಿ‌ನಲ್ಲೂ ಸಹ ಆಯಿತು. ಭಾರತದ ರಾಯಭಾರಿಗಳ ಆಗಮನ ಸ್ವಲ್ಪ ತಡವಾದಾಗ ಕಾರ್ಯಕ್ರಮವೂ ತಡವಾಗುವ ಭಯವಾಗಿತ್ತು. ಆದರೆ ಅವರಿಲ್ಲದೇ ಮಿಕ್ಕ ಅತಿಥಿಗಳನ್ನು ಇನ್ನೇನು ವೇದಿಕೆಯ ಮೇಲೆ ಕರೆತರೆಬೇಕೆಂದು ಸಾದರಪಡಿಸುವಷ್ಟರಲ್ಲೇ ರಾಯಭಾರಿಗಳು ಹಾಜರಾಗಿ ಕಾರ್ಯಕ್ರಮವನ್ನು ಸರಿಯಾದ ವೇಳೆಗೆ ಪ್ರಾರಂಭವಾಗಿ ಶುಭಾರಂಭಕ್ಕೆ ನಾಂದಿಯಾಯಿತು.

KSR_WEB-302

 

ಕಾರ್ಯಕ್ರಮಗಳು ಒಂದಾದ ಮೇಲೊಂದು ಸರಿಯಾದ ವೇಳೆಗೆ ನಡೆಯುತ್ತಲೇ ಹೋದವು. ಊಟದ ವೇಳೆಗೆ ಊಟ, ಕಾಪಿ ವೇಳೆಯಲ್ಲಿ ಕಾಫಿ, ಬೇಕೆನಿಸಿದಾಗ ನೀರು. ಒಂದು ಮದುವೆ ಮನೆಯ ವಾತಾವರಣ. KSR ನವರೆಲ್ಲಾ ವರನ ಕಡೆಯವರಂತೆ ಕಂಡು ಬಂದರು. ಸಾಹಿತ್ಯರಂಗವೆಂಬ ವಧುವಿಗೆ ಟೆಕ್ಸಸ್ನ ಸಾಹಿತ್ಯಾಸಕ್ತರೆಂಬ ವಧುವಿನೊಡನೆ ವಿವಾಹೋತ್ಸವವಾದಂತೆ ಅನುಭವವಾಗಿತ್ತು. ಎಲ್ಲದಕ್ಕೂ ಕಾರಣ ಹ್ಯೂಸ್ಟನ್ ಕನ್ನಡ ಕಾರ್ಯಕರ್ತರು. ಎಲ್ಲರನ್ನೂ ಹೆಸರಿಸಲು ಪ್ರಯತ್ನಿಸಿದ್ದೇನೆ. ಬಿಟ್ಟಿದ್ದರೆ, ನನಗೂ ವಯಸ್ಸಾಗುತ್ತಿದೆ ಎಂದರ್ಥ. ಕ್ಷಮಿಸಿ. ನಾನಂತು ಯಾವುದೇ ಕಾರ್ಯಕರ್ತರನ್ನು ಬಿಡಲಿಲ್ಲ. ಎಲ್ಲರ ಬಳಿಯೂ ನೇರವಾಗಿ ಕೆಲಸ ಹೇಳುತ್ತಿದ್ದೆ. ಕ್ಷಮಿಸಿ ಅದೇ ನನ್ನ ಸ್ಟೈಲ್! ಫೋನಿನಲ್ಲೂ ಕಾಡಿಸಿ, ಸಮಾವೇಶದಲ್ಲೂ ಪ್ರತಿ ಹೆಜ್ಜೆಗೂ ಅವರೊಡನೆ ಸಂಪರ್ಕಿಸುತ್ತಿದ್ದವರೆಂದರೆ ಯಶವಂತ್ ಹಾಗೂ ಮಂಗಳ ಅವರು. ರಂಗದ ಹಿಂಬದಿಯಲ್ಲಿ ಮಹೇಶ್ ಹಾಗೂ ಧೀರಜ್ ಕೊಟ್ಟ ಭುಜ ಬಲ ವರ್ಣಿಸಲಸಾಧ್ಯ. ಮಯೂರ್ ಅವರ ಸಹಾಯವನ್ನೂ ಮರೆಯಲಾರೆ. ಇನ್ನು 2 ನಟ್ಟುಗಳು ಎಲ್ಲಾ ಕೆಲಸಕ್ಕೂ ಹಾಜರ್. ರವಿ ನಮ್ಮ ರಂಗ ಸಮಿತಿಯಲ್ಲಿ ಇಲ್ಲದಿದ್ದರೂ ಅವರನ್ನು ಬಿಡಲಿಲ್ಲ, ಅವರನ್ನೂ ಕೆಲಸಕ್ಕೆ ಎಳೆಯುತ್ತಿದ್ದೆ. ಎಲ್ಲರಿಗೂ ಎಷ್ಟು ವಂದನೆಗಳನ್ನು ಹೇಳಿದರೂ ಸಾಲದು. ಒಂದೇ ಹೇಳ ಬಲ್ಲೆ ನಿಮ್ಮ ಬಲವೊಂದಿದ್ದರೆ ಸಾಕು ನಾನು ವಿಶ್ವ ಸಮ್ಮೇಳನವನ್ನೂ ಮಾಡ ಬಲ್ಲೆ. ಮತ್ತೆ ಸಿಗೋಣ.

KSR_WEB-88

ಕೆ.ವಿ.ತಿರುಮಲೇಶ್, ಎಸ್.ಎಸ್, ಶ್ರೀಧರ್ ಮತ್ತು ಶ್ರೀಪತಿ ತಂತ್ರಿಯವರೊಂದಿಗಿನ ‘ಸಂವಾದ”

 

 

            ಇದು ಕಾರ್ಯಕ್ರಮ ನಡೆಸಿದ್ದಾಯಿತು. ಇನ್ನು ನನ್ನೊಂದಿಗೆ ಕಾರ್ಯಕ್ರಮ ಮಾಡಿದವರಿಗೂ ನಾನು ಚಿರ‌ಋಣಿ. ನನ್ನೊಂದಿಗೆ ನಾಟಕ ವಾಚನ ಮಾಡಿದ ಮೋಹನ್ ರಾಮ್, ಮೀರಾ ರಾಜಗೋಪಾಲ್ ಅವರಿಗೂ ಹಾಗೂ ಕಾರ್ಯಕ್ರಮದ ನಿರ್ವಾಹಕರಾದ ಹಾಗೂ ನಾಟಕದ ಕರ್ತೃ ಗುರುಪ್ರಸಾದ್ ಅವರಿಗೂ ವಂದನೆಗಳು. ಪ್ರತಿವಸಂತ ಸಾಹಿತ್ಯೋತ್ಸವದಲ್ಲಿ ಎರಡು ಕಾರ್ಯಕ್ರಮಗಳು ಬಹಳ ಕಷ್ಟವಾದ ಕಾರ್ಯಕ್ರಮಗಳು. ಅಂತಹ ಒಂದು ಸಾಹಿತ್ಯಗೋಷ್ಠಿ. ಅದರಲ್ಲಿ ನಾನು ಭಾಗಿಯಾಗಿದ್ದು ನನ್ನ ಅದೃಷ್ಟ. ಅದನ್ನು ಕರಾರುವಾಕ್ಕಾಗಿ ನಡೆಸಿಕೊಟ್ಟ ನಳಿನಿ ಮಯ್ಯ ಅವರಿಗೂ, ನಟರಾಜ್ ಅವರಿಗೂ ವಂದನೆಗಳು. ದಶಕದ ಪುಟಗಳನ್ನು ತಯಾರಿಸುವುದರಲ್ಲಿ ಸಹಾಯಮಾಡಿದ ರಾಜಗೋಪಾಲರಿಗೂ ವಂದನೆಗಳು. 

KSR_WEB-82

‘ಸಂವಾದ’ ನಡೆಸಿಕೊಡುತ್ತಿರುವ ವಲ್ಲೀಶ್

ಸಂವಾದ ಕಾರ್ಯಕ್ರಮ ನನಗೆ ಬಹಳ ಇಷ್ಟವಾದ ಕಾರ್ಯಕ್ರಮ. ನನ್ನ ಹುಚ್ಚು ಪ್ರಶ್ನೆಗಳಿಗೆ ನನ್ನೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅತಿಥಿಗಳಾದ ತಿರುಮಲೇಶ್, ತಂತ್ರಿ ಹಾಗೂ ಶ್ರೀಧರ್ ಅವರಿಗೂ ನನ್ನ ವಂದನೆಗಳು. ಮನರಂಜನೆ ಕಾರ್ಯಕ್ರಮಗಳು ಸೊಗಸಾಗಿದ್ದವು. ಇದರಲ್ಲಿ ಅದರ ಹಿಂದೆ ಪಟ್ಟ ಶ್ರಮ ವ್ಯಕ್ತವಾಗುತ್ತಿತ್ತು. ಮಕ್ಕಳ ನಾಟಕವಂತೂ ಅಮೆರಿಕೆಯಲ್ಲಿನ ಕನ್ನಡ ಕಲಿಕೆ ಕನ್ನಡಿಯಾಗಿತ್ತು. ಎಲ್ಲಾ ತಂಡಗಳಿಗೂ, ಗಾಯಕರಿಗೂ ವಂದನೆಗಳು.

ಒಟ್ಟಿನಲ್ಲಿ ಮದುವೆ ಮುಗಿಸಿಕೊಂಡು ಮನೆಗೆ ಬಂದ ನನಗೆ, ಎಲ್ಲಾ ನನ್ನ ಹೆಂಡತಿಗೆ ವಿವರಿಸಿದಾಗ ತಾನೂ ಮದುವೆಗೆ ಬರಬೇಕಿತ್ತೆಂದು ಈಗ ಹೇಳುತ್ತಿದ್ದಾಳೆ…
ನಮಸ್ಕಾರ,

ಇತಿ,

ವಲ್ಲೀಶ
(ಬೆಲ್ ಈಶ)

 Posted by at 10:17 AM