Nov 252012
 

ಮೈ.ಶ್ರೀ. ನಟರಾಜ

೨೦೧೩ ರ ಮೇ ಮಾಸದಲ್ಲಿ ಹ್ಯೂಸ್ಟನ್ ನಗರದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ರಂಗದ ವಸಂತೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಬರಲು ಶ್ರೀ. ಕೆ.ವಿ. ತಿರುಮಲೇಶ್ ಅವರು ನಮ್ಮ ಆಹ್ವಾನವನ್ನು ಒಪ್ಪಿಕೊಂಡಾದಮೇಲೆ ಅವರ ಎರಡು ಕವಿತೆಗಳನ್ನು ನಾನು “ಕೆಂಡ ಸಂಪಿಗೆ” ಜಾಲತಾಣದಲ್ಲಿ ಓದಿದೆ. ಓದಿದೊಡನೆಯೇ ಅವು ನನಗೆ ಪ್ರಿಯವಾದವು, ಹಾಗಾಗಿ ಆ ಕವಿತೆಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ ಮೂಲ ಕವಿಯೊಂದಿಗೆ ಹಂಚಿಕೊಂಡೆ. ಅನುವಾದವನ್ನು ಅವರು ಮೆಚ್ಚಿಕೊಂಡರು, ಅಷ್ಟೇ ಅಲ್ಲ, ಮೂಲ ಕವಿತೆಗಳನ್ನೂ ಅನುವಾದಗಳನ್ನೂ ಕನ್ನಡ ಸಾಹಿತ್ಯ ರಂಗದ ಜಾಲತಾಣದಲ್ಲಿ ಪ್ರಕಟಿಸಲು ತಿರುಮಲೇಶರನ್ನು ನಾನು ಕೇಳಿಕೊಂಡಾಗ ಸಂತೋಷದಿಂದಲೇ ಒಪ್ಪಿಗೆ ಕೊಟ್ಟಿದ್ದಾರೆ. ನಮ್ಮ ಓದುಗರೊಡನೆ ಹಂಚಿಕೊಳ್ಳುತ್ತಿದ್ದೇನೆ, ಇದೋ ಸ್ವೀಕರಿಸಿ.

 Posted by at 12:32 AM