ಕೆ.ವಿ.ತಿರುಮಲೇಶ್
|
If I am not for myself, who will be for me? ಎಲ್ಲರಿಗೆ ನಾನಿದ್ದೇನೆ ನನಗೆ ಯಾರಿದ್ದಾರೆ ಒಂದು ಹೂವಿಗೂ ಗೊತ್ತಿರುತ್ತದೆ |
ಗೋಡೆಯ ಮೇಲೆ ಬಿದ್ದ ನೆರಳೇ ನೀನೆಷ್ಟು |
ಕೆ.ವಿ.ತಿರುಮಲೇಶ್
|
If I am not for myself, who will be for me? ಎಲ್ಲರಿಗೆ ನಾನಿದ್ದೇನೆ ನನಗೆ ಯಾರಿದ್ದಾರೆ ಒಂದು ಹೂವಿಗೂ ಗೊತ್ತಿರುತ್ತದೆ |
ಗೋಡೆಯ ಮೇಲೆ ಬಿದ್ದ ನೆರಳೇ ನೀನೆಷ್ಟು |
Original Poem in Kannada “ninna taaTasthyadali nanna” By Prof. K.V. Tirumalesh
English Translation by Dr. M.S. Nataraja
|
I am there for all, who is there for me? Even a flower knows |
And how much of me, are you? If I will wake up at all, in the morning? |
ಬುಕ್ ಕ್ಲಬ್ – ಕನ್ನಡ ಸಾಹಿತ್ಯ ರಂಗದ ವತಿಯಿಂದ ಹೊಸದಾಗಿ ಪ್ರಾರಂಭವಾಗಿರುವ ಸಾಹಿತ್ಯ ಚಟುವಟಿಕೆ. ಅಮೆರಿಕದಾದ್ಯಂತ ಹಂಚಿಹೋಗಿರುವ ಸದಸ್ಯರು ದೂರವಾಣಿಯಲ್ಲಿ ಏಕಕಾಲಕ್ಕೆ ಸೇರಿ, ತಮಗೆ ಇಷ್ಟವಾದ ಸಣ್ಣಕಥೆಯೊಂದರ ಕುರಿತು ಅಭಿಪ್ರಾಯ ವಿನಿಮಯ ನಡೆಸುವುದು ಇದರ ಹಿಂದಿರುವ ಉದ್ದೇಶ. ಈಗಾಗಲೇ ಈ ರೀತಿಯ ಹಲವಾರು ಗುಂಪುಗಳು ಸಮಾನ ಅಭಿರುಚಿ ಉಳ್ಳವರನ್ನು ಸೇರಿಸಿಕೊಂಡು ತಮ್ಮ ಸಾಹಿತ್ಯಾಸಕ್ತಿಯನ್ನು ಪೋಷಿಸಿಕೊಂಡು ಬರುತ್ತಿವೆ. ಕನ್ನಡ ಸಾಹಿತ್ಯ ರಂಗವೂ ಸಾಹಿತ್ಯ ಚರ್ಚೆಗಾಗಿ ಇಂತಹ ವೇದಿಕೆಯೊಂದನ್ನು ಪ್ರಾರಂಭಿಸಬೇಕೆಂದು ನಿರ್ದರಿಸಿ, ಅದಕ್ಕೆ ಸ್ಪಷ್ಟವಾದೊಂದು ರೂಪ ಕೊಟ್ಟವರು ಕಥೆಗಾರ, ಕಾದಂಬರಿಕಾರ, ಕನ್ನಡ ಸಾಹಿತ್ಯ ರಂಗದ ಉಪಾಧ್ಯಕ್ಷರೂ ಆಗಿರುವ ಗುರುಪ್ರಸಾದ್ ಕಾಗಿನೆಲೆಯವರು.
ಕನ್ನಡ ಸಾಹಿತ್ಯ ರಂಗದ ಸದಸ್ಯರಿಗೆ ಸೂಚಿಸಿದ ಸಣ್ಣಕಥೆಯೊಂದನ್ನು ಮುಂಚಿತವಾಗಿ ವಿ-ಅಂಚೆಯ ಮೂಲಕ ಕಳಿಸಿಕೊಡುವುದು, ಸದಸ್ಯರು ಅದನ್ನು ಮುಂಚಿತವಾಗಿ ಓದಿಕೊಂಡು ನಂತರ ಸಭೆಯಲ್ಲಿ ಭಾಗವಹಿಸಿ ಚರ್ಚಿಸುವುದು, ಇದರ ಸದ್ಯದ ರೂಪರೇಷೆ. ಅವಕಾಶವಾದಲ್ಲಿ, ಅಮೆರಿಕ ಪ್ರವಾಸಕ್ಕೆಂದು ಬರುವ, ಭಾರತದಲ್ಲೂ ಇರುವ, ಕವಿ-ಲೇಖಕ-ಸಾಹಿತಿಗಳನ್ನೂ ಸಂವಾದದಲ್ಲಿ ತೊಡಗಿಸಿಕೊಳ್ಳುವ, ಅವರ ವಿಚಾರಧಾರೆಯನ್ನು ಹಂಚಿಕೊಳ್ಳುವ ಯೋಜನಯೂ ಇದರಲ್ಲಿ ಸೇರಿಕೊಂಡಿದೆ.
ಕನ್ನಡ ಸಾಹಿತ್ಯ ರಂಗದ ಎಲ್ಲಾ ಸದಸ್ಯರೊಡನೆ ವಿಚಾರ ವಿನಿಮಯ ನಡೆಸಿದ ನಂತರ, ಅಕ್ಟೋಬರ್, ೨೧, ೨೦೧೨, ಶನಿವಾರದಂದು ಬುಕ್ ಕ್ಲಬ್ನ ಮೊದಲ ಸಭೆ ಸೇರುವುದೆಂದು ನಿರ್ಧಾರವಾಯಿತು. ಮೊದಲನೆಯ ಸಭೆಯಲ್ಲಿ ಸಂವಾದಕ್ಕೆಂದು ಆರಿಸಿಕೊಂಡಿದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಣ್ಣ ಕಥೆ “ಕಲ್ಮಾಡಿಯ ಕೋಣ”. ಅಕ್ಟೋಬರ್ ೨೧ ರ ಸಾಯಂಕಾಲ ಪೂರ್ವ ಕರಾವಳಿಯ ಸಮಯ ಐದು ಘಂಟೆಗೆ ಪ್ರಾರಂಭಗೊಂಡು ಆರು ಘಂಟೆಗೆ ಸಭೆ ಮುಕ್ತಾಯಗೊಂಡಿತು. ೨೨ ಜನ ಸಾಹಿತ್ಯ ಪ್ರೇಮಿಗಳು ಈ ಸಭೆಯಲ್ಲಿ ಭಾಗವಹಿಸಿದ್ದು, ಮಾಸ್ತಿಯವರ ಕಥೆಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಭೆಯಲ್ಲಿ ಚರ್ಚಿತಗೊಂಡ ಕಥೆ ‘ಕಲ್ಮಾಡಿಯ ಕೋಣ’ದ ಪಿಡಿಎಫ್ ರೂಪದಲ್ಲಿ ಇಲ್ಲಿ ಲಭ್ಯವಿದೆ. ಈ ಕಥೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸರ್ವರಿಗೂ ಸ್ವಾಗತವಿದೆ. ಕಾಮೆಂಟ್ ರೂಪದಲ್ಲಿ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಿ.
ಬನ್ನಿ, ಸಾಹಿತ್ಯ ಪಯಣದಲ್ಲಿ ಸಹಯಾತ್ರಿಕರಾಗೋಣ..
========================================================================================================
ಮಾಸ್ತಿಯವರ ಸಣ್ಣ ಕಥೆ – ಕಲ್ಮಾಡಿಯ ಕೋಣ
ಕಲ್ಮಾಡಿಯ ಕೋಣ – ಮಾಸ್ತಿ ವೆಂಕಟೇಶ ಅಯ್ಯಂಗಾರ್
ಈ ಕಥೆಯ ಕುರಿತು, ಕನ್ನಡ ಸಾಹಿತ್ಯ ರಂಗದ ಸದಸ್ಯರಾದ ಕೃಷ್ಣಪ್ರಿಯ ಅವರ ಆಸಕ್ತಿಕರ ಟಿಪ್ಪಣಿ ಇಲ್ಲಿದೆ. ಈ ಬಗ್ಗೆ ಮತ್ತಷ್ಟು ಹೊಸ ನೋಟಗಳು ಇಲ್ಲಿ ಸಾಧ್ಯವಾಗಲಿ.
* ಕತೆ, ಸಿನಿಮಾಗಳ ಸಾರವನ್ನು ಒಂದು ವಾಕ್ಯದಲ್ಲಿ ಹೇಳುವ ಪ್ರಯತ್ನ ಉಪಯುಕ್ತ ಎಂದು ಎಲ್ಲೋ ನೋಡಿದ್ದೇನೆ. ಅದು ಇಲ್ಲಿ ಮಾಡಿದರೆ, “ಕೋಣ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿ ಮುಂದೆ ಎರಡು ಕೋಣ ಬಲಿಯಾಗುವಂತೆ ಮಾಡುತ್ತದೆ” ಎಂದು ಹೇಳಬಹುದೇ?
* ಭಾವ-೨ರಲ್ಲಿ ಚಿರತೆಯ ಬೇಟೆಯ ವಿಷಯಕ್ಕೆ(೧೨ನೆಯ ಪ್ರಕರಣ,ಚಿರತೆಯ ಬೇಟೆ), ಈ ಕತೆಗೆ ಹೋಲಿಕೆ ಇದೆ.
* ಕಲ್ಮಾಡಿ – ಇಂಟರ್ನೆಟ್ಟಿನಲ್ಲಿ ಹುಡುಕಿದರೆ ಮಹಾರಾಷ್ಟ್ರದಲ್ಲಿ ಸಿಕ್ಕುತ್ತದೆ. ಊರು, ಕತೆಯಲ್ಲಿ ಹೇಳುವಂತೆ ಮಂಗಳೂರಿನ ಹತ್ತಿರವೂ ಇದೆ, ಇಂಗ್ಲೀಷಿನಲ್ಲಿ ಕೆಲವು ಕಡೆ ಈ ಊರಿನ ಕಡೆಯ ಅಕ್ಷರ ವೈ. ರಾಜಕಾರಣಿ ‘ಸುರೇಶ್ ಕಲ್ಮಾಡಿ’ಯವರ ಹೆಸರು ಅದೇ ರೀತಿಯದು.
* ಇಲ್ಲಿ ಈ ಹೆಸರಿನ ಬಳಕೆ. ನಿರೂಪಕನ, ಕತೆಯ, ಜಾಗ ಸೂಚಿಸುವುದು (ಅದು ಮಂಗಳೂರಿನ ಕಡೆ ಅಲ್ಲ ಎಂದು ಹೇಳುವುದು ಮುಖ್ಯ)? ಕತೆಗೆ ದ್ರಾವಿಡ ಹೆಸರು, ಸಂಸ್ಕೃತದ ಹೆಸರಿನ ಊರಿಗಿಂತ ಸರಿಹೋಗುತ್ತದೆ? “ಕಲ್ಮಾಡಿ”, “ಕೋಣ”ಗಳ ಅಲಿಟಏಷನ್. ಹಲ್ಮಡಿ ಶಾಸನ ಪ್ರಸಿದ್ಧವಾಗಿರುವುದರಿಂದ, ಅದಕ್ಕೆ ಹತ್ತಿರದ ಸಾಮ್ಯ ಇರುವ ಹೆಸರು (ಕಕಾರ, ಹಕಾರ ಉಚ್ಚಾರಣೆಯಲ್ಲಿ ಹತ್ತಿರದವು).
* ಕಲ್ಮಾಡಿ ಎಂಬ ಊರು, ಮಂಗಳೂರಿನ ಕಡೆ ಅಲ್ಲದೆ ಬೇರೆ ಕಡೆ ಇಲ್ಲದೆ ಇರುವುದು, ಆ ಹೆಸರಿನ ಊರಿನವರಿಗೆ ಮುಜುಗರ ಆಗದೆ ಇರುವಂತೆ ಮಾಡುವ ತಂತ್ರ? ಈ ರೀತಿಯ ಪ್ರಯತ್ನವನ್ನು “ಬೀದಿಯಲ್ಲಿ ಹೋಗುವ ನಾರಿ”ಯಲ್ಲಿನ ಬೆಂಗಳೂರು, ಮೈಸೂರು ಅಲ್ಲದ “ಮಯಿಳೂರನ್ನು” ಹುಟ್ಟಿಸಿರುವುದರಲ್ಲಿ ನೋಡಬಹುದು.
* ನಿರೂಪಕನ ಪಾತ್ರ (ಉತ್ತಮ ಪುರುಷದಲ್ಲಿ ಕತೆ ಹೇಳಿದರೂ, ನಿರೂಪಕ ಮಾಸ್ತಿ ಅಲ್ಲದೆ ಇರುವ ಸಂಭವ ಹೆಚ್ಚು). ಯೂರೋಪಿನ ಬಗ್ಗೆ ಗೊತ್ತು. ಹೆಸರುಗಳ ವಿಷಯದಲ್ಲಿ ಆಸಕ್ತಿ ಇದೆ, ಆದರೆ ಪರಿಣತಿ ಇಲ್ಲ. ’ಪ್ರಮೋಷನ್’ ಪದ ಬಳಸುತ್ತಾನೆ.
ಹೊರಹಳ್ಳಿ – ಬೆಂಗಳೂರಿನ ಹತ್ತಿರದ (ಬೆಂಗಳೂರಿನ ಭಾಗವೇ ಆಗಿರುವ) ಊರು?
ಹಾಲಾರ – ?
ಮಜರೆ ? – ಕಂದಾಯದ ಲೆಕ್ಕಕ್ಕೆ ಸಂಬಂಧಪಟ್ಟ ಪದ? ಮುಜುರಾಯಿ?
ಗಾಡಿಯಲ್ಲಿ ಇಳಿದು ಹೋಗುವುದು, ಗುಡ್ಡ, ಬಯಲು ಸೀಮೆ ಸೂಚಿಸುತ್ತವೆ
ಮನಸರಿಗನ್ನ – ಮನುಷ್ಯರಿಗಿಂತ
ಐಗಳ ರಾಗಿ – ಅಳತೆಯೇ
ಕೊಳಗ – ನಾಕು ಬಳ್ಳ, ೧೬ ಸೇರು, ಕೊಳದಪ್ಪಲೆ ಎಂಬ ಪ್ರಯೋಗ ಇದೆ. ಇತರ ಅಳತೆಗಳು – ಸೇರು, ಪಾವು, ಚಟಾಕು,(ಮಣ, ತೂಕದ್ದು), ಪಲ್ಲ, ದಡಿಯ
ಮೋಸಾಗಿ – ಮೊಳೆತು, ಅಂಕುರವಾಗಿ
ಹಸಿಗೆಯಾಗಿ – ಬೇರೆಯಾಗಿ
ಕರಗಾಗಲಿ – ಹರಿವಾಗಲಿ (ಹಿಂದಿನ ಕರಗಿ ಹರಿಯಿತು ಎನ್ನುವುದರ ಮುಂದುವರಿಕೆ)
ದೇವರ ಗುಡ್ಡ – ಪೂಜಾರಿ
ಸಿಂಧೂರ – ಕುಂಕುಮ
ಕಸುಬಿನ ಕೊರೆ – ಎರಡು ಸಲ ಅಲ್ಲಿ ಹೋಗಿ ನೋಡಬೇಕು, ಅಲ್ಲಿ ಹೋಗಿ ಕೇಳಬೇಕು ಬಳಕೆ
ಸಾಂಗ್ಯ – ನಿಘಂಟುಗಳಲ್ಲಿ ಇರುವಂತಿಲ್ಲ (ಕಿಟ್ಟೆಲ್, ವೆಂಕಟಸುಬ್ಬಯ್ಯ), ಸಂದರ್ಭದಿಂದ ಅರ್ಥ ತಿಳಿಯುತ್ತದೆ.
ಸೇಸೆ ಹಾಕುವುದು – ಹಣೆಗೆ ಅಕ್ಷತೆ ಹಾಕುವುದು
ಸೋಬಾನೆ – ಮಂಗಳದ ಹಾಡು
ಬೆಗಡುಗೊಂಡಿತು – ಅಶ್ಚರ್ಯ, ಭಯ ಪಟ್ಟಿತು
ನಿಟ್ಟು – ನಿಯಮ (ಕಟ್ಟುನಿಟ್ಟು)
ಹಲಲೋ ಕುಲಲೋ- ಕೂಗಾಟದ ಶಬ್ದ
ದಾರಿಯ ನಿಟ್ಟು – ದಾರಿಯ ದಿಕ್ಕು, ಗುರಿ
ಮಂಚಿಗೆ – ಮಟ್ಟಸವಾದ, ಸುತ್ತಮುತ್ತಲ ಜಾಗಕ್ಕಿಂತ ಎತ್ತರವಾದ ಜಾಗ, ಹೊಲ ಕಾಯಲು ಬಳಸುವ ಅಟ್ಟ.
ಎಡೆ – ನೈವೇದ್ಯ
ಆರೋಗಣೆ – ಊಟ
ಮುಸಾಫರ್ – ಪ್ರವಾಸಿ (ಅರಬ್ಬೀ ಪದ, ಸಫ಼ರ್, ಇಂಗ್ಲೀಷಿನ ಸಫ಼ಾರಿಗಳಿಗೆ ಸಂಬಂಧಿಸಿದ್ದು)
ತೊಂಡು – ಉದ್ಧಟತನ, ಬೇಕಾದ್ದನ್ನು ಮೇಯುವುದು
“ಜೀವ ಉಳಿಯುವುದೆಂತು? ಎಂದಿದ್ದರೂ ಅದು ಸಾಯಬೇಕು. ಉಳಿಯುವುದು ಸಾವು….”!
========================================================================================================