Dec 142014
 

 

 ಎಚ್. ಕೆ. ನಂಜುಂಡಸ್ವಾಮಿ

ಎಚ್. ಕೆ. ನಂಜುಂಡಸ್ವಾಮಿ

ನವೆಂಬರ್, ೩೦, ೨೦೧೪ರಂದು ನಮ್ಮನ್ನು ಅಗಲಿದ ಎಚ್. ಕೆ. ನಂಜುಂಡಸ್ವಾಮಿಯವರಿಗೆ ಕನ್ನಡ ಸಾಹಿತ್ಯರಂಗವು ಶ್ರದ್ಧಾಂಜಲಿ ಅರ್ಪಿಸುತ್ತಿದೆ…

 Posted by at 9:10 PM
Oct 232014
 

ಅಮೆರಿಕದಲ್ಲಿರುವ ಕನ್ನಡ ಬರಹಗಾರರಿಗೆಲ್ಲಾ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ನಮ್ಮ-ನಿಮ್ಮೆಲ್ಲರ ’ಕನ್ನಡ ಸಾಹಿತ್ಯ ರಂಗ’ ವು ೨೦೧೫ ರ ಏಳನೆಯ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಸಮ್ಮೇಳನದ ವಿವರಗಳನ್ನು ಸಧ್ಯದಲ್ಲಿಯೇ ತಿಳಿಸಲಾಗುವುದು.

ಪ್ರತಿ ಸಮ್ಮೇಳನದಲ್ಲೂ ಯಾವುದಾದರೊಂದು ವಿಶೇಷ ವಿಷಯವನ್ನು ಕುರಿತಂತೆ ಕನ್ನಡ ಸಾಹಿತ್ಯ ರಂಗವು ಪುಸ್ತಕವನ್ನು ಹೊರತರುವುದು ತಮಗೆಲ್ಲಾ ತಿಳಿದ ಸಂಗತಿ. ಇದೇ ನಿಟ್ಟಿನಲ್ಲಿ ಮುಂದುವರಿಯುತ್ತಾ ಮುಂದಿನ ಸಮ್ಮೇಳನದ ಪುಸ್ತಕಕ್ಕಾಗಿ ಪತ್ರಮುಖೇನ ನಿಮ್ಮೆಲ್ಲರನ್ನೂ ಲೇಖನಗಳಿಗಾಗಿ ಆಹ್ವಾನಿಸುತ್ತಿದ್ದೇವೆ. ಇದರ ಯಶಸ್ಸಿಗೆ ಎಂದಿನಂತೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ.

ಈ ಬಾರಿಯ ವಿಷಯ – ’ಅನುವಾದ ಸಾಹಿತ್ಯ’
ಅನುವಾದವೆಂದರೇನು? ಎಂದು ಪ್ರಶ್ನಿಸಿದರೆ, ಕೃತಿಯ ಧ್ವನಿಗೆ ಲೋಪ ಬಾರದಂತೆ ಭಾವಾನುವಾದ ಮಾಡುವುದು ಅಥವಾ ಶಬ್ದಶಃ ಭಾಷಾನುವಾದ ಮಾಡುವುದು. ಬಹುತೇಕ ಅನುವಾದಗಳು ಇವೆರಡರ ಮಧ್ಯೆ ನಿಲ್ಲುವ ಸಾಧ್ಯತೆ ಹೆಚ್ಚು. ಅದರಲ್ಲೂ ವಿಭಿನ್ನ ಸಂಸ್ಕೃತಿಗಳ ಭಾಷಾನುವಾದ ಬಹಳ ಕಷ್ಟಸಾಧ್ಯವಾಗಬಹುದು.

ಕನ್ನಡ ಭಾಷಾ ಸಾಹಿತ್ಯಕ್ಕೆ ಇತರ ಭಾಷೆಗಳಿಂದ ಸಮೃದ್ಧವಾಗಿ ಅನುವಾದಗಳ ಮೂಲಕ ಸಾಹಿತ್ಯ ಪ್ರವಹಿಸಿದಂತೆ ಕನ್ನಡ ಭಾಷೆಯ ಉತ್ತಮ ಕೃತಿಗಳೂ ಸಹ ವಿಶ್ವದ ಇತರೆ ಭಾಷೆಗಳಿಗೆ ಅನುವಾದಗೊಂಡಿವೆ. ಕಥೆ, ಕಾದಂಬರಿ, ನಾಟಕ, ಪ್ರಬಂಧ, ಕವಿತೆ, ಪದ್ಯ, ಕಾವ್ಯ ಹೀಗೆ ಸಾಹಿತ್ಯದ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಅನುವಾದಗಳು ನಡೆದಿವೆ.

ಈ ಹಿನ್ನೆಲೆಯಲ್ಲಿ ನಾವು ಮುಂದಿನ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕೃತಿಗಳನ್ನು ಇಂಗ್ಲೀಷಿಗೂ ಮತ್ತು ಬೇರೆ ಭಾಷೆಗಳಲ್ಲಿನ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೂ ಅನುವಾದಮಾಡಿ ಪ್ರಕಟಿಸುವ ಮೂಲಕ ಸಾಹಿತ್ಯದ ಈ ಕೊಡುಕೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ಯೋಚಿಸಿದ್ದೇವೆ. ಈ ನಮ್ಮ ಉದ್ದೇಶ ಸಫಲವಾಗಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ.
ನೀವು ಬೇರೆ ಭಾಷೆಗಳಲ್ಲಿ ಓದಿದ ಕೃತಿಯನ್ನು ಕನ್ನಡೀಕರಿಸಲು ಇದೊಂದು ಸದವಕಾಶ ಮತ್ತು ಕನ್ನಡದ ಉತ್ತಮ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಲೂಬಹುದು. ನೀವು ಕಳುಹಿಸಬಹುದಾದ ಅನುವಾದಿತ ಕೃತಿಯು ನಿಮ್ಮ ಸ್ವಂತದ್ದಾಗಿದ್ದು, ಈ ಮುನ್ನ ಬೇರೆಲ್ಲೂ ಪ್ರಕಟವಾಗಿರಕೂಡದು. ಕಥೆ, ಕವನ, ಚುಟುಕ, ಹಾಸ್ಯ, ಕಿರು ನಾಟಕ, ಪ್ರಬಂಧ ಇತ್ಯಾದಿಗಳಿಗೆ ಸ್ವಾಗತ.

ಅನುವಾದಕರಿಗೆ ಸೂಚನೆಗಳು
ಅಕ್ಷರದ ಗಾತ್ರ ೧೪ರಲ್ಲಿದ್ದು, ಅನುವಾದಿತ ಬರಹವು ಸುಮಾರು ೮-೧೦ ಪುಟಗಳಿಷ್ಟಿರಲಿ. ಬರಹ ಅಥವಾ ಎಮ್. ಎಸ್. ವರ್ಡ್. ಕಡತವನ್ನು ಉಪಯೋಗಿಸಿ.
ನಿಮ್ಮ ಅನುವಾದಿತ ಕೃತಿಯನ್ನು ಕಳುಹಿಸಲು ಕೊನೆಯ ದಿನಾಂಕ ಡಿಸೆಂಬರ್ ೨೦, ೨೦೧೪.
ಕೃತಿಯ ಜೊತೆಗೆ ನಿಮ್ಮ ಮತ್ತು ಮೂಲ ಲೇಖಕರ ಪುಟ್ಟ ಪರಿಚಯ ಪತ್ರ ಮತ್ತು ಭಾವಚಿತ್ರವನ್ನು ಕಳುಹಿಸುವುದು.
ನಿಮ್ಮ ಕೃತಿಗಳನ್ನು ಕಳುಹಿಸಬೇಕಾದ ವಿಳಾಸ: ksrsammelana2015@gmail.com
ನಿಮ್ಮ ಕೃತಿಯ ಮೂಲ ಲೇಖಕರ ಹೆಸರು, ಭಾಷೆ, ಪ್ರಕಟವಾದ ದಿನಾಂಕ, ಪುಸ್ತಕ, ಇತ್ಯಾದಿಗಳ ವಿವರಗಳನ್ನು ನಮ್ಮ ಸಂಪಾದಕ ಮಂಡಳಿಯೊಡನೆ ಮೊದಲೇ ಹಂಚಿಕೊಳ್ಳಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಗಾಗಿ ಅಥವಾ ಕಾಪಿರೈಟ್ ವಿಚಾರಗಳಿಗೆ ಸಂಪಾದಕ ಮಂಡಳಿಯನ್ನು ಸಂಪರ್ಕಿಸುವುದು.
ಕನ್ನಡದ ಕೃತಿಗಳನ್ನು ಇಂಗ್ಲೀಷಿಗೆ ಅನುವಾದ ಮಾಡುವವರಿಗೊಂದು ಸೂಚನೆ – ದಯವಿಟ್ಟು ೨೦೦೦ ರ ನಂತರ ಪ್ರಕಟಿತವಾದ ಕೃತಿಗಳನ್ನು ಆಯ್ದುಕೊಳ್ಳುವುದು ಅಥವಾ ಅಮೆರಿಕದ AKKA ಮತ್ತು KSR ನಿಂದ ಮುದ್ರಿತವಾದ ಉತ್ತಮವಾದ ಲೇಖನಗಳನ್ನು ಅನುವಾದಿಸಲು ಆರಿಸಿಕೊಳ್ಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಳಿಗೆ ಸಂಪಾದಕ ಮಂಡಳಿಯನ್ನು ಸಂಪರ್ಕಿಸಬಹುದು.
ಅನುವಾದಿತ ಕೃತಿಯು ಮುದ್ರಣದ ವಿಷಯದಲ್ಲಿ ಸಂಪಾದಕರ ನಿರ್ಣಯವೇ ಅಂತಿಮವೆಂದು ಪರಿಗಣಿಸಲಾಗುವುದು.

ನಿಮ್ಮ ಪ್ರೋತ್ಸಾಹ ಮತ್ತು ಸಹಕಾರಗಳನ್ನು ನಿರೀಕ್ಷಿಸುವ,
ಕ.ಸಾ.ರಂ. ಸಂಪಾದಕ ಮಂಡಳಿ
Sreekantha Babu – svenkatesha@hotmail.com
Meera P.R – bhameera@gmail.com
Vaishali Hegde – vaishalimadhu@gmail.com
Prakash H Nayak – phn66@yahoo.com
Guruprasad Kaginele – gkaginele@hotmail.com

 Posted by at 9:36 PM
Sep 102014
 

KSR-Logo

May, 29, 2004

ಸ್ಥಳ  : ವಿಲನೊವ ವಿಶ್ವವಿದ್ಯಾಲಯ ಫಿಲಡೆಲ್ಫಿಯ

ಸಹಪ್ರವರ್ತಕರು: ವಿಲನೋವ ವಿಶ್ವವಿದ್ಯಾಲಯದ ಪ್ರಾಚೀನ ಮತ್ತು ಅಧುನಿಕ ಭಾಷಾ ಸಾಹಿತ್ಯಗಳ ವಿಭಾಗ; ಸಹಕಾರ: ತ್ರಿವೇಣಿ (ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ)
ಮುಖ್ಯ ವಸ್ತು: ಕುವೆಂಪು ಜನ್ಮ ಶತಮಾನೋತ್ಸವ
ಮುಖ್ಯ ಅತಿಥಿ: ಡಾ. ಪ್ರಭುಶಂಕರ; ಭಾಷಣ: “ಕನ್ನಡ ಸಾಹಿತ್ಯ: ಒಂದು ಮಿಂಚು ನೋಟ”
ಪುಸ್ತಕ ಬಿಡುಗಡೆ: “ಕುವೆಂಪು ಸಾಹಿತ್ಯ ಸಮೀಕ್ಷೆ” ಪ್ರಧಾನ ಸಂಪಾದಕ: ನಾಗ ಐತಾಳ

2005

ಸ್ಥಳ :  ಲಾಸ್ ಏಂಜಲೀಸ್

ಮುಖ್ಯ ಅತಿಥಿಗಳು – ಬರಗೂರು ರಾಮಚಂದ್ರಪ್ಪ
ಪುಸ್ತಕ ಬಿಡುಗಡೆ – ಆಚೀಚೆಯ ಕಥೆಗಳು

ಸಂಪಾದಕರು : ಗುರುಪ್ರಸಾದ್ ಕಾಗಿನೆಲೆ,

2007

ಸ್ಥಳ : ಬಾಲಾಜಿ ದೇವಾಲಯ, ಅರೋರ, ಇಲಿನಾಯ್
ಮುಖ್ಯ ಅತಿಥಿಗಳು: ಪ್ರೊ. ಅ.ರಾ.ಮಿತ್ರ ಮತ್ತು ಡಾ. ಎಚ್.ಎಸ್.ರಾಘವೇಂದ್ರ ರಾವ್
ಪುಸ್ತಕ ಬಿಡುಗಡೆ – ನಗೆಗನ್ನಡಂ ಗಲ್ಗೆ

ಸಂಪಾದಕರು : ಎಚ್. ಕೆ. ನಂಜುಂಡಸ್ವಾಮಿ, ಎಚ್. ವೈ. ರಾಜಗೋಪಾಲ್

April 31 – May -01, 2009

ಸ್ಥಳ : ವಾಷಿಂಗ್ಟನ್ ಡಿಸಿ.

ಮುಖ್ಯ ಅತಿಥಿಗಳು: ವೀಣಾ ಶಾಂತೇಶ್ವರ ಮತ್ತು ವೈದೇಹಿ

ಪುಸ್ತಕ ಬಿಡುಗಡೆ: ಕನ್ನಡ ಕಾದಂಬರಿ ಲೋಕದಲ್ಲಿ ಹೀಗೆ ಹಲವು ಕಳೆದ ಕಾಲು ಶತಮಾನದ ಪ್ರಮುಖ ಕನ್ನಡ ಕಾದಂಬರಿಗಳ ಅವಲೋಕನ

ಸಂಪಾದಕರು :  ಮೈ, ಶ್ರೀ. ನಟರಾಜ
ವರ್ಷ 2011

ಸ್ಥಳ : -ವುಡ್ ಸೈಡ್ ಪ್ರೌಢಶಾಲೆ, ಚರ್ಚಿಲ್ ಅವೆನ್ಯು CA 94062.

ಮುಖ್ಯ ಅತಿಥಿಗಳು: ಸುಮತೀಂದ್ರ ನಾಡಿಗ ಮತ್ತು ಭುವನೇಶ್ವರಿ ಹೆಗಡೆ

ಪುಸ್ತಕ ಬಿಡುಗಡೆ: ಮಥಿಸಿದಷ್ಟೂ ಮಾತು (ಅಮೆರಿಕದ ಕನ್ನಡಿಗರ ಸಲ್ಲಾಪ-ಹರಟೆ-ಚಿಂತನೆ)

ಸಂಪಾದಕರು : ತ್ರಿವೇಣಿ ಶ್ರೀನಿವಾಸರಾವ್, ಎಂ. ಆರ್. ದತ್ತಾತ್ರಿ

May 17, 18, 2013

ಸ್ಥಳ : ಹ್ಯೂಸ್ಟನ್, ಟೆಕ್ಸಸ್
ಮುಖ್ಯ ಅತಿಥಿಗಳು – ಕೆ.ವಿ. ತಿರುಮಲೇಶ್

ಪುಸ್ತಕ ಬಿಡುಗಡೆ – ಬೇರು ಸೂರು

ಸಂಪಾದಕರು : ಗುರುಪ್ರಸಾದ್ ಕಾಗಿನೆಲೆ, ಜ್ಯೋತಿ ಮಹದೇವ್, ತ್ರಿವೇಣಿ ಶ್ರೀನಿವಾಸರಾವ್

 May 30, 31, 2015 

ಸಾರಂ ಮುಂದಿನ ಸಮ್ಮೇಳನ  ಮೇ, ೩೦, ೩೧ ರಂದು ಮಿಸೋರಿ ರಾಜ್ಯದ ಸೈಂಟ್‍ಲೂಯಿಸಿನಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ…

 Posted by at 9:37 AM