Feb 142024
 

ಕನ್ನಡ ಸಾಹಿತ್ಯ ರಂಗದ ಹನ್ನೊಂದನೆಯ ವಸಂತೋತ್ಸವ!

ಕನ್ನಡ ಸಾಹಿತ್ಯ ರಂಗದ ಹನ್ನೊಂದನೆಯ ವಸಂತೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಬಾರಿಯ ಸಮ್ಮೇಳನವು ‘ಶರಾವತಿ ಕನ್ನಡ ಬಳಗ’ದ ಸಹಯೋಗದೊಂದಿಗೆ ಮೇರಿಲ್ಯಾಂಡಿನಲ್ಲಿ ಮೇ 17-18,19, 2024 ರಂದು ಮೂರು ದಿನಗಳ ಕಾಲ ನಡೆಯಲಿದೆ.
ಸಮ್ಮೇಳನಕ್ಕೆ ಆಗಮಿಸುತ್ತಿರುವ ಮುಖ್ಯ ಅತಿಥಿಗಳು, ಸಮ್ಮೇಳನದಲ್ಲಿ ಬಿಡುಗಡೆಯಾಗಲಿರುವ ಪುಸ್ತಕ… ಮತ್ತಿತರ ವಿವರಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುತ್ತದೆ.
ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ!
 Posted by at 10:53 AM
Jan 282023
 
ಹಿರಿಯ ಅಮೆರಿಕನ್ನಡಿತಿಯಾಗಿ, ಮಾತೃಹೃದಯಿಯಂತಿದ್ದ ನಾಗಲಕ್ಷ್ಮಿ ಹರಿಹರೇಶ್ವರ ಅವರು ಅಲ್ಪಕಾಲದ ಅಸ್ವಾಸ್ಥ್ಯದ ಬಳಿಕ ನಿನ್ನೆ, (ಶನಿವಾರ 28 ಜನವರಿ 2023) ಮಧ್ಯಾಹ್ನ 2 ಗಂಟೆ ಸಮಯಕ್ಕೆ (ಅಮೆರಿಕ ಪೂರ್ವ ಕರಾವಳಿ ಸಮಯ) ಇಹಲೋಕ ತ್ಯಜಿಸಿದರೆಂದು ತಿಳಿಸಲು ವಿಷಾದವಾಗುತ್ತಿದೆ. ಮೃತರಿಗೆ ಸದ್ಗತಿ ದೊರೆಯಲಿ ಮತ್ತು ಕುಟುಂಬಸ್ಥರಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿ ಸಿಗಲೆಂದು ನಾವೆಲ್ಲರೂ ಪ್ರಾರ್ಥಿಸೋಣ.
ದಿವಂಗತ ನಾಗಲಕ್ಷ್ಮಿ ಹರಿಹರೇಶ್ವರ ಅವರಿಗೆ ಕನ್ನಡ ಸಾಹಿತ್ಯ ರಂಗದ ಭಾವಪೂರ್ಣ ಶ್ರದ್ಧಾಂಜಲಿಗಳು!
 Posted by at 11:49 PM