May 232013
 

 

“ಪ್ರಪಂಚದ ಸುಮಾರು 6000 ಭಾಷೆಗಳಲ್ಲಿ ಅರ್ಧದಷ್ಟು ಭಾಷೆಗಳು ಅವನತಿಯ ಅಂಚಿನಲ್ಲಿದೆ. ಇನ್ನೂ ಶೇ.40 ರಷ್ಟು ಭಾಷೆಗಳು ಸಧ್ಯದಲ್ಲೇ ಸ್ಥಿತಿಗೆ ಜಾರುವ ಸ್ಥಿತಿಯಲ್ಲಿದೆ. ಏಕೆಂದರೆ ಇವುಗಳನ್ನು ಬಳೆಸುವವರು ವಯಸ್ಕರು ಮಾತ್ರ ಆಗಿದ್ದು, ಅವುಗಳನ್ನಾಡುವ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿವೆ.” ಹೀಗೆ ಹೇಳಿದವರು ಪ್ರೊ. ತಿರುಮಲೇಶ್. ಸಂದರ್ಭ: ಹ್ಯೂಸ್ಟನ್ ಕನ್ನಡ ವೃಂದ ಹಾಗೂ ಇತರ ಟೆಕ್ಸಸ್ ಕನ್ನಡ ಕೂಟಗಳ ಸಹಾಯದೊಂದಿಗೆ ಕನ್ನಡ ಸಾಹಿತ್ಯ ರಂಗ (ಯು.ಎಸ್.ಎ) ಪ್ರಸ್ತುತ ಪಡಿಸಿದ “6ನೇ ವಸಂತ ಸಾಹಿತ್ಯೋತ್ಸವ”. ಮೇ 18, 19 ರಂದು ಹ್ಯೂಸ್ಟನ್ ನಗರದ ರೈಸ್ ವಿಶ್ವ ವಿದ್ಯಾಲಯದ ಹಮ್ಮನ್ ಹಾಲ್ನಲ್ಲಿ ನಡೆಯಿತು. ಇದು ಕನ್ನಡ ಸಾಹಿತ್ಯ ರಂಗದ ದಶಮಾನೋತ್ಸವವೂ ಆಗಿತ್ತು. ಹ್ಯೂಸ್ಟನ್ ನಗರದಲ್ಲಿರುವ ಭಾರತ ರಾಯಭಾರ ಕಚೇರಿಯ ದೂತವಾಸರಾದ ಶ್ರೀ. ಹರೀಶ್ ಪರ್ವತನೇನಿ ಅವರಿಂದ ಉದ್ಘಾಟಿಸಲ್ಪಟ್ಟ ಸಮಾವೇಶ ಸರಿಯಾದ ವೇಳೆಗೆ ಪ್ರಾರಂಭವಾಗಿ ಅಮೆರಿಕೆಯ ಕನ್ನಡ ಸಾಹಿತ್ಯಾಸಕ್ತರ ಉಲ್ಲಾಸಕ್ಕೆ ಮುದ ಕೊಟ್ಟಿತ್ತು. ಸಮಾವೇಶದ ಮುಖ್ಯ ಅತಿಥಿಯಾಗಿ ಹೈದರಾಬಾದಿನಿಂದ ಹೊರನಾಡ ಕನ್ನಡಿಗರಾಗಿ ಪ್ರೊ.ತಿರುಮಲೇಶ್, ಆಹ್ವಾನಿತ ಅತಿಥಿಗಳಾಗಿ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯ, ನ್ಯೂಯಾರ್ಕ್ ನಲ್ಲಿ ಭಾಷಾ ವಿಭಾಗದ ಪ್ರೊಫೆಸರ್ ಆದ ಎಸ್ ಎನ್ ಶ್ರೀಧರ್ ಹಾಗೂ ಕರ್ನಾಟಕದಿಂದ ವಿಶೇಷ ಅತಿಥಿಗಳಾಗಿ ಪ್ರೊ. ತಂತ್ರಿ ಅವರು ಆಗಮಿಸಿದ್ದರು.

ಪ್ರಾರಂಭದಲ್ಲಿ ಅಮೆರಿಕ ಕನ್ನಡಿಗರು ತಮ್ಮ ಅಮೆರಿಕದಲ್ಲಿನ ಬದುಕಿನ ಬಗೆಗಿನ ಲೇಖನ ಸಂಗ್ರಹ ಗುರುಪ್ರಸಾದ್ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್ ಹಾಗೂ ಜ್ಯೋತಿ ಮಹದೇವ್ ಅವರ ಸಂಪಾದಕತ್ವದಲ್ಲಿ ಮೂಡಿಬಂದ “ಬೇರು ಸೂರು” ಎಂಬ ಗ್ರಂಥದ ಲೋಕಾರ್ಪಣೆಯ ನಂತರ ಮುಖ್ಯ ಅತಿಥಿಗಳ ಭಾಷಣದಲ್ಲಿ “ನಮ್ಮ ಭಾಷೆಯನ್ನು ನಾವು ಎತ್ತದೇ ಹೋದರೆ, ಎತ್ತುವರು ಯಾರು? ಎತ್ತುವುದಕ್ಕೆ ನಿಂತರೆ ತಡೆಯುವವರು ಯಾರು?” ಎಂಬ ಬಿ. ಎಂ. ಶ್ರೀಯವರ ನುಡಿಗಳೊಂದಿಗೆ ಪ್ರಾರಂಭಿಸಿ “ಕನ್ನಡದ ಮುನ್ನಡೆ: ಸವಾಲುಗಳು ಹಾಗೂ ಅವಕಾಶಗಳು” ಎಂಬ ವಷಯವಾಗಿ ಮಾತನಾಡಿದರು. “ಪ್ರಪಂಚದ ಅವನತಿಯ ಹಂತಕ್ಕೆ ತಳ್ಳುತ್ತಿರುವ ಬಾಷೆಗಳಲ್ಲಿ ಕನ್ನಡ ಒಂದಾಗದಿರಲಿ” ಎಂದು ಹರಸಿದರು. ಇದೇ ಸಂದರ್ಭದಲ್ಲಿ ದಿ. ರಾಜಾರಾವ್ ಅವರ ಅಪ್ರಕಟಿತ ಇಂಗ್ಲೀಷ್ ಕಾದಂಬರಿ ’Song of Woman” ಇದರ ಅನುವಾದ (ಅನುವಾದಕರು: ಡಾ|| ಶ್ರೀನಾಥ್) “ನಾರೀಗಿತ” ಸಹ ಲೋಕಾರ್ಪಣೆಯಾಯಿತು.

 

KSR_WEB-537

ಜ್ಯೋತಿ ಬೆಳಗಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿ ಶುಭ ಸಂದೇಶ ನೀಡುತ್ತಿರುವ ಕಾನ್ಸಲ್ ಜನರಲ್ ಶ್ರೀ ಪರ್ವತನೇನಿ ಹರೀಶ್

ಅಮೆರಿಕನ್ನಡ ಲೇಖಕರಿಂದ ಪ್ರಸ್ತುತವಾದ ಕಾರ್ಯಕ್ರಮ “ಸಾಹಿತ್ಯಗೋಷ್ಠಿ”. ಇದರಲ್ಲಿ ಕವಿತೆ, ಲೇಖನಗಳ ಪಠಣವಾಯಿತು. ವಿವಿಧ ಕವನಗಳು, ಹಾಸ್ಯ ಲೇಖನಗಳು ಸಭಿಕರನ್ನು ರಂಜಿಸಿತ್ತು. ಪ್ರಥಮ ಬಾರಿಗೆ ವಿವೇಕ್ ಶ್ಯಾನಭೋಗ್ ರವರ ’ನಿರ್ವಾಣ’ ಕಥೆಯನ್ನು ನಾಟಕ ರೂಪಾಂತರಿಸಿ ವಾಚನವನ್ನು ನಿರ್ದೇಶಿಸಿದವರು ಡಾ|| ಗುರುಪ್ರಸಾದ್ ಕಾಗಿನೆಲೆ ಅವರು. ವಲ್ಲೀಶ ಶಾಸ್ತ್ರಿ, ಮೋಹನ್ ರಾಂ ಹಾಗೂ ಮೀರಾ ರಾಜಗೋಪಾಲ್ ಅವರ ವಾಚನದೊಂದಿಗೆ ಮೂಡಿ ಬಂದ ಕಾರ್ಯಕ್ರಮ ಎಲ್ಲರಿಂದಲೂ ಪ್ರಶಂಸೆ ಪಡೆದಿತ್ತು. ದಶಮಾನೋತ್ವದ ಸಂದರ್ಭದಲ್ಲಿ ಸಾಹಿತ್ಯರಂಗದ ಹತ್ತುವರ್ಷಗಳ ಬೆಳವಣಿಗೆಯನ್ನು ವಲ್ಲೀಶ ಶಾಸ್ತ್ರಿಯವರು ರಾಜಗೋಪಾಲ್ ಅವರ ಸಹಕಾರದೊಂದಿಗೆ ನಿರ್ಮಿಸಿದ “ದಶಕದ ಪುಟಗಳು” ಎಂಬ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.

ಸಂಜೆ ನಡೆದ ಮನರಂಜನೆ ಕಾರ್ಯಕ್ರಮಗಳು ಆಕರ್ಷಕವಾಗಿದ್ದವು. “Black Swan” ಇಂಗ್ಲೀಷ್ ಕಥೆಯನ್ನಾದರಿಸಿ ಮೋಹನ್ ರಾಂ ಭಾಷಾಂತರಿಸಿ ಡಾ|| ರಾಜಂ ರಾಮಮೂರ್ತಿಯವರ ನಿರ್ದೇಶನದಲ್ಲಿ ಮೂಡಿಬಂದ ನೃತ್ಯರೂಪಕ “ಕಾಳ ಹಂಸ” ಎಲ್ಲರ ಮನಸ್ಸು ಗೆದ್ದಿತ್ತು. ಯಕ್ಷಗಾನ ಹಾಗೂ ನೃತ್ಯ ಕಾರ್ಯಕ್ರಮಗಳು ಸಹ ಸಭಿಕರ ಮನರಂಜಿಸಿದವು. ಕನ್ನಡಗೀತೆಗಳಿಂದ ಪ್ರಾರಂಭವಾದ ಎರಡನೇ ದಿನದ ಕಾರ್ಯಕ್ರಮ ಕಳೆದ ಎರಡು ವರ್ಷಗಳಲ್ಲಿ ಪ್ರಕಟಗೊಂಡ ಅಮೆರಿಕೆಯ ಕನ್ನಡದ ಹೆಮ್ಮೆಯ ಬರಹಗಾರರ ಕೃತಿಗಳ ಬಗ್ಗೆ ವಿಶ್ಲೇಷಿಸಿ ಲೇಖಕರನ್ನು ಗೌರವಿಸಲಾಯಿತು. ನಂತರ ನಡೆದ ಕಾರ್ಯಕ್ರಮ ಒಂದು ಅಪರೂಪದ ಕಾರ್ಯಕ್ರಮ. ಕನ್ನಡದಲ್ಲೂ ಅಲ್ಲದೇ ಇಂಗ್ಲೀಷ್ ನಲ್ಲೂ ಶ್ರೇಷ್ಟ ಲೇಖಕರೆಂದೇ ಪ್ರಸಿದ್ಧರಾಗಿದ್ದ ರಾಜಾರಾವ್ ಅವರ ಬಗ್ಗೆ ಸಾಹಿತ್ಯರಂಗ ಒಂದು ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ’ಭಾಷಾ ಪ್ರಪಂಚಕ್ಕೆ ರಾಜಾರಾವ್ ಅವರ ಕೊಡುಗೆ’ ಎನ್ನುವುದರ ಬಗ್ಗೆ ಮಾತನಾಡಿದ ಸಂಹಿತ ಪ್ರಸನ್ನ ಮೂರ್ತಿ ಅವರು ರಾಜರಾವ್ ಅವರ ಭಾಷಾ ಪ್ರಪಂಚಕ್ಕೆ ಅವರ ಕೊಡುಗೆ ಅಪಾರ ಎಂದರು. “ಒಂದು ವೇಳೆ Song of Woman ಏನಾದರೂ ರಾಜಾರಾವ್ ಅವರೇ ಕನ್ನಡದಲ್ಲಿ ಬರೆದಿದ್ದರೆ ಕನ್ನಡಕ್ಕೆ ಇನ್ನೊಂದು ಜ್ಞಾನ ಪೀಠ ಬರುವುದರಲ್ಲಿ ಸಂಶಯವೇ ಇರಲಿಲ್ಲ” ಎಂದವರು ಪ್ರೊ. ಎಸ್ ಎನ್ ಶ್ರೀಧರ್ ಅವರು. ರಾಜರಾವ್ ಅವರ ಕನ್ನಡ ಕಾದಂಬರಿ ’ಕಾಂತಾಪುರ” ದ ಬಗ್ಗೆ ಹೆಮ್ಮೆಯ ಮಾತನಾಡಿದರು. ಶ್ರೀಮತಿ. ಸೂಸನ್ ರಾಜಾರಾವ್ ಅವರೂ ಸಹ ವೇದಿಕೆಯ ಮೇಲೆ ಪ್ರಸ್ತುತರಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯಲ್ಲಿರುವವರು:- ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷರಾದ ಎಂ.ಎಸ್.ನಟರಾಜ್, ಶ್ರೀಪತಿ ತಂತ್ರಿ, ಎಚ್. ವೈ. ರಾಜಗೋಪಾಲ್, ಕೆ.ವಿ, ತಿರುಮಲೇಶ್, ಎಸ್. ಎನ್. ಶ್ರೀಧರ್ ಮತ್ತು ವತ್ಸ ಕುಮಾರ್

 

ಸಭಿಕರಲ್ಲಿ ಬಹಳ ಆಸಕ್ತಿ ಮೂಡಿಸಿದ ಕಾರ್ಯಕ್ರಮವೆಂದರೆ “ಸಂವಾದ” ಕಾರ್ಯಕ್ರಮ. ಹೊರದೇಶದ ಕನ್ನಡಿಗ ಎಸ್ ಎನ್ ಶ್ರೀಧರ್, ಹೊರನಾಡ ಕನ್ನಡಿಗರಾದ ತಿರುಮಲೇಶ್ ಹಾಗೂ ಒಳನಾಡ ಕನ್ನಡಿಗರಾದ ತಂತ್ರಿಯವರೊಡನೆ “ವಿದೇಶದಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆ” ಎಂಬ ವಿಷಯವಾಗಿ ಉಲ್ಲಾಸಕರವಾಗಿ ನಡೆಸಿಕೊಟ್ಟವರು ವಲ್ಲೀಶ ಶಾಸ್ತ್ರಿ. ಇಂದಿನ ಇಂಟರ್ ನೆಟ್ ಯುಗದಲ್ಲಿ ಸಾಹಿತ್ಯ ಬೆಳವಣಿಗೆ ಹಾಗೂ ಒಳನಾಡ ಕನ್ನಡಿಗರ ಸಾಹಿತ್ಯಕ್ಕೂ ಹೊರನಾಡ ಕನ್ನಡಿಗರ ಸಾಹಿತ್ಯಕ್ಕೂ ಇರುವ ವ್ಯತ್ಯಾಸದ ಬಗ್ಗೆ ಚರ್ಚಿಸಲಾಯಿತು. ನಂತರ ಮಾತನಾಡಿದ ಪ್ರೊ. ತಂತ್ರಿ ಅವರು ಪಶ್ಚಿಮ ಕರಾವಳಿಯ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಮಾತನಾಡಿ ಕರಾವಳಿಯ ಬಾಷಾ ಬೆಳವಣಿಗೆಯ ಬಗ್ಗೆ ಹಾಗೂ ವ್ಯತ್ಯಾಸಗಳ ಬಗ್ಗೆ ಮಾತನಾಡಿದರು, ದಲ್ಲಾಸ್ ಕನ್ನಡ ಕಲಿ ಮಕ್ಕಳಿಂದ ನಡೆದ “ಕೌಬಾಯ್ ಕೃಷ್ಣ” ಎಲ್ಲರ ಮನ ಸೆಳೆದಿತ್ತು. ಎರಡೂ ದಿನದ ಊಟದ ವ್ಯವಸ್ಥೆ ಮಾತ್ರ ನಿಷ್ಕಳಂಕವಾಗಿತ್ತೆಂದರೆ ಅತಿಶಯೋಕ್ತಿಯಲ್ಲ. ಹ್ಯೂಸ್ಟನ್ ಕನ್ನಡ ಸಂಘದ ಎಲ್ಲಾ ಸ್ವಯಂ ಸೇವಕರಿಗೆ ವೈಯಕ್ತಕವಾಗಿ ವೇದಿಕೆಯ ಮೇಲೆ ಕರೆತಂದು ವಂದಿಸಿದ ವತ್ಸಕುಮಾರ್, ಸಮಾವೇಶಕ್ಕೆ ಸಹಾಯ ಮಾಡಿದ ಎಲ್ಲರಿಗೂ ವಂದಿಸಿದವರು ಸಾಹಿತ್ಯರಂಗದ ಅಧ್ಯಕ್ಷರಾದ ನಟರಾಜ್ ಅವರು. ಇದರೊಂದಿಗೆ 2 ದಿನದ ಸಾಹಿತ್ಯ ಹಬ್ಬ ಮುಗಿದಿತ್ತು.

– ಮವಾಸು

 Posted by at 1:44 PM
May 212013
 

ಕನ್ನಡ ಸಾಹಿತ್ಯ ರಂಗದ ದಶಮಾನೋತ್ಸವಕ್ಕೆ ಇದಕ್ಕಿಂತ ಹೆಚ್ಚಿನ ಉಡುಗೊರೆ ಬೇರೊಂದಿಲ್ಲ!

 

ಸಾಹಿತ್ಯ ರಂಗದ ದಶಮಾನೋತ್ಸವದ ಆಚರಣೆಗೆ ಇದಕ್ಕಿಂತ ಹೆಚ್ಚಿನ ಉಡುಗೊರೆ ಬೇರೊಂದಿಲ್ಲ.. ಹ್ಯೂಸ್ಟನ್ ಕನ್ನಡ ವೃಂದದವರ ಈ ದಶಮಾನೋತ್ಸವದ ಕೊಡುಗೆ ಎಂದೂ ಮರೆಯಲು ಸಾಧ್ಯವಿಲ್ಲ. ಆದಿಯಿಂದ ಕಡೆಯವರೆಗೂ ಒಂದೂ ಕಪ್ಪು ಛಾಯೆಗಳೇ ಇಲ್ಲದಂತ ಈ ಸಮಾವೇಶ ಬಹುಶಃ ಈ 6 ವಸಂತ ಸಾಹಿತ್ಯೋತ್ಸಗಳಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ.

ವಸಂತೋತ್ಸವ ಇದ್ದಿದ್ದು ಮೇ 18 (ಶನಿವಾರ) ಹಾಗೂ 19 (ಭಾನುವಾರ) ಆದರೂ, ನಿಜವಾದ ಉತ್ಸವ ಶುಕ್ರವಾರವೇ ಪ್ರಾರಂಭವಾಗಿತ್ತು. ಸಾಹಿತ್ಯೋತ್ಸವ ವಿಜ್ರಂಭಣೆಯಿಂದ ನಡೆಯುತ್ತದೆ ಎನ್ನುವ ಸುಳಿವು ಶುಕ್ರವಾರ ಸಂಜೆ ನಡೆದ ಗೆಜ್ಜೆಪೂಜೆಯಲ್ಲೇ ಸಿಕ್ಕಿತ್ತು. ವಸಂತೋತ್ಸವಕ್ಕೆ ವೃಂದದ ನಡೆಸಿದ್ದ ತಾಲೀಮು ಇದನ್ನು ಸಾದರ ಪಡಿಸಿತ್ತು. ಭೋಜನದಿಂದ ಹಿಡಿದು ಉತ್ಸವಕ್ಕೆ ಬೇಕಾದ ಎಲ್ಲ ಕಾರ್ಯಗಳ ತಾಲೀಮನ್ನು ವೃಂದ ನಡೆಸಿತ್ತು. 200ಕ್ಕೂ ಹೆಚ್ಚು ನೋಂದಣಿಗಾರರನ್ನು ಸ್ವಾಗತಿಸಲು ಸಜ್ಜಾಗಿದ್ದರು ವೃಂದದ ಸ್ವಯಂ ಸೇವಕರು. ಹ್ಯೂಸ್ಟನ್ ಶೆಕೆಯಲ್ಲೂ ಬೆವರು ಸುರಿಸುತ್ತಾ ಬೆಳಗಿನಿಂದಲೂ ಕಷ್ಟ ಪಟ್ಟು ಕೆಲಸಮಾಡಿ ದುಡಿಯುತ್ತಿದ್ದುದು ಕಾಣ ಬರುತ್ತಿತ್ತು. ರಾತ್ರಿಯ ಊಟವೂ ಸೊಗಸಾಗಿತ್ತು..

 

KSR_WEB-289

 

ವಸಂತ ಸಾಹಿತ್ಯೋತ್ಸವದ ವಿಶೇಷವೆಂದರೆ ಪ್ರತಿ ಕಾರ್ಯಕ್ರಮವೂ ಪ್ರಕಟಿಸಿದ ವೇಳೆಗೆ ಪ್ರಾರಂಭವಾಗಿ ಪ್ರಕಟಿಸಿದ ಕಾಲದಲ್ಲೇ ಮುಗಿಯುವುದು. ಅದರ ಶುಭಾರಂಭವಾಗುವುದೇ ಸಮಾವೇಶದ ಮೊದಲ ದಿವಸ. ಪ್ರಾರಂಭ ಕರಾರುವಾಕ್ಕಾಗಿ ಆದರೆ ಮುಂದಿನ ಕಾರ್ಯಕ್ರಮಗಳು ಸುಲಲಿತವಾಗಿ ನಡೆದುಕೊಂಡು ಹೋಗುತ್ತದೆ. ಅದರಂತೆ ಹ್ಯೂಸ್ಟನಿ‌ನಲ್ಲೂ ಸಹ ಆಯಿತು. ಭಾರತದ ರಾಯಭಾರಿಗಳ ಆಗಮನ ಸ್ವಲ್ಪ ತಡವಾದಾಗ ಕಾರ್ಯಕ್ರಮವೂ ತಡವಾಗುವ ಭಯವಾಗಿತ್ತು. ಆದರೆ ಅವರಿಲ್ಲದೇ ಮಿಕ್ಕ ಅತಿಥಿಗಳನ್ನು ಇನ್ನೇನು ವೇದಿಕೆಯ ಮೇಲೆ ಕರೆತರೆಬೇಕೆಂದು ಸಾದರಪಡಿಸುವಷ್ಟರಲ್ಲೇ ರಾಯಭಾರಿಗಳು ಹಾಜರಾಗಿ ಕಾರ್ಯಕ್ರಮವನ್ನು ಸರಿಯಾದ ವೇಳೆಗೆ ಪ್ರಾರಂಭವಾಗಿ ಶುಭಾರಂಭಕ್ಕೆ ನಾಂದಿಯಾಯಿತು.

KSR_WEB-302

 

ಕಾರ್ಯಕ್ರಮಗಳು ಒಂದಾದ ಮೇಲೊಂದು ಸರಿಯಾದ ವೇಳೆಗೆ ನಡೆಯುತ್ತಲೇ ಹೋದವು. ಊಟದ ವೇಳೆಗೆ ಊಟ, ಕಾಪಿ ವೇಳೆಯಲ್ಲಿ ಕಾಫಿ, ಬೇಕೆನಿಸಿದಾಗ ನೀರು. ಒಂದು ಮದುವೆ ಮನೆಯ ವಾತಾವರಣ. KSR ನವರೆಲ್ಲಾ ವರನ ಕಡೆಯವರಂತೆ ಕಂಡು ಬಂದರು. ಸಾಹಿತ್ಯರಂಗವೆಂಬ ವಧುವಿಗೆ ಟೆಕ್ಸಸ್ನ ಸಾಹಿತ್ಯಾಸಕ್ತರೆಂಬ ವಧುವಿನೊಡನೆ ವಿವಾಹೋತ್ಸವವಾದಂತೆ ಅನುಭವವಾಗಿತ್ತು. ಎಲ್ಲದಕ್ಕೂ ಕಾರಣ ಹ್ಯೂಸ್ಟನ್ ಕನ್ನಡ ಕಾರ್ಯಕರ್ತರು. ಎಲ್ಲರನ್ನೂ ಹೆಸರಿಸಲು ಪ್ರಯತ್ನಿಸಿದ್ದೇನೆ. ಬಿಟ್ಟಿದ್ದರೆ, ನನಗೂ ವಯಸ್ಸಾಗುತ್ತಿದೆ ಎಂದರ್ಥ. ಕ್ಷಮಿಸಿ. ನಾನಂತು ಯಾವುದೇ ಕಾರ್ಯಕರ್ತರನ್ನು ಬಿಡಲಿಲ್ಲ. ಎಲ್ಲರ ಬಳಿಯೂ ನೇರವಾಗಿ ಕೆಲಸ ಹೇಳುತ್ತಿದ್ದೆ. ಕ್ಷಮಿಸಿ ಅದೇ ನನ್ನ ಸ್ಟೈಲ್! ಫೋನಿನಲ್ಲೂ ಕಾಡಿಸಿ, ಸಮಾವೇಶದಲ್ಲೂ ಪ್ರತಿ ಹೆಜ್ಜೆಗೂ ಅವರೊಡನೆ ಸಂಪರ್ಕಿಸುತ್ತಿದ್ದವರೆಂದರೆ ಯಶವಂತ್ ಹಾಗೂ ಮಂಗಳ ಅವರು. ರಂಗದ ಹಿಂಬದಿಯಲ್ಲಿ ಮಹೇಶ್ ಹಾಗೂ ಧೀರಜ್ ಕೊಟ್ಟ ಭುಜ ಬಲ ವರ್ಣಿಸಲಸಾಧ್ಯ. ಮಯೂರ್ ಅವರ ಸಹಾಯವನ್ನೂ ಮರೆಯಲಾರೆ. ಇನ್ನು 2 ನಟ್ಟುಗಳು ಎಲ್ಲಾ ಕೆಲಸಕ್ಕೂ ಹಾಜರ್. ರವಿ ನಮ್ಮ ರಂಗ ಸಮಿತಿಯಲ್ಲಿ ಇಲ್ಲದಿದ್ದರೂ ಅವರನ್ನು ಬಿಡಲಿಲ್ಲ, ಅವರನ್ನೂ ಕೆಲಸಕ್ಕೆ ಎಳೆಯುತ್ತಿದ್ದೆ. ಎಲ್ಲರಿಗೂ ಎಷ್ಟು ವಂದನೆಗಳನ್ನು ಹೇಳಿದರೂ ಸಾಲದು. ಒಂದೇ ಹೇಳ ಬಲ್ಲೆ ನಿಮ್ಮ ಬಲವೊಂದಿದ್ದರೆ ಸಾಕು ನಾನು ವಿಶ್ವ ಸಮ್ಮೇಳನವನ್ನೂ ಮಾಡ ಬಲ್ಲೆ. ಮತ್ತೆ ಸಿಗೋಣ.

KSR_WEB-88

ಕೆ.ವಿ.ತಿರುಮಲೇಶ್, ಎಸ್.ಎಸ್, ಶ್ರೀಧರ್ ಮತ್ತು ಶ್ರೀಪತಿ ತಂತ್ರಿಯವರೊಂದಿಗಿನ ‘ಸಂವಾದ”

 

 

            ಇದು ಕಾರ್ಯಕ್ರಮ ನಡೆಸಿದ್ದಾಯಿತು. ಇನ್ನು ನನ್ನೊಂದಿಗೆ ಕಾರ್ಯಕ್ರಮ ಮಾಡಿದವರಿಗೂ ನಾನು ಚಿರ‌ಋಣಿ. ನನ್ನೊಂದಿಗೆ ನಾಟಕ ವಾಚನ ಮಾಡಿದ ಮೋಹನ್ ರಾಮ್, ಮೀರಾ ರಾಜಗೋಪಾಲ್ ಅವರಿಗೂ ಹಾಗೂ ಕಾರ್ಯಕ್ರಮದ ನಿರ್ವಾಹಕರಾದ ಹಾಗೂ ನಾಟಕದ ಕರ್ತೃ ಗುರುಪ್ರಸಾದ್ ಅವರಿಗೂ ವಂದನೆಗಳು. ಪ್ರತಿವಸಂತ ಸಾಹಿತ್ಯೋತ್ಸವದಲ್ಲಿ ಎರಡು ಕಾರ್ಯಕ್ರಮಗಳು ಬಹಳ ಕಷ್ಟವಾದ ಕಾರ್ಯಕ್ರಮಗಳು. ಅಂತಹ ಒಂದು ಸಾಹಿತ್ಯಗೋಷ್ಠಿ. ಅದರಲ್ಲಿ ನಾನು ಭಾಗಿಯಾಗಿದ್ದು ನನ್ನ ಅದೃಷ್ಟ. ಅದನ್ನು ಕರಾರುವಾಕ್ಕಾಗಿ ನಡೆಸಿಕೊಟ್ಟ ನಳಿನಿ ಮಯ್ಯ ಅವರಿಗೂ, ನಟರಾಜ್ ಅವರಿಗೂ ವಂದನೆಗಳು. ದಶಕದ ಪುಟಗಳನ್ನು ತಯಾರಿಸುವುದರಲ್ಲಿ ಸಹಾಯಮಾಡಿದ ರಾಜಗೋಪಾಲರಿಗೂ ವಂದನೆಗಳು. 

KSR_WEB-82

‘ಸಂವಾದ’ ನಡೆಸಿಕೊಡುತ್ತಿರುವ ವಲ್ಲೀಶ್

ಸಂವಾದ ಕಾರ್ಯಕ್ರಮ ನನಗೆ ಬಹಳ ಇಷ್ಟವಾದ ಕಾರ್ಯಕ್ರಮ. ನನ್ನ ಹುಚ್ಚು ಪ್ರಶ್ನೆಗಳಿಗೆ ನನ್ನೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅತಿಥಿಗಳಾದ ತಿರುಮಲೇಶ್, ತಂತ್ರಿ ಹಾಗೂ ಶ್ರೀಧರ್ ಅವರಿಗೂ ನನ್ನ ವಂದನೆಗಳು. ಮನರಂಜನೆ ಕಾರ್ಯಕ್ರಮಗಳು ಸೊಗಸಾಗಿದ್ದವು. ಇದರಲ್ಲಿ ಅದರ ಹಿಂದೆ ಪಟ್ಟ ಶ್ರಮ ವ್ಯಕ್ತವಾಗುತ್ತಿತ್ತು. ಮಕ್ಕಳ ನಾಟಕವಂತೂ ಅಮೆರಿಕೆಯಲ್ಲಿನ ಕನ್ನಡ ಕಲಿಕೆ ಕನ್ನಡಿಯಾಗಿತ್ತು. ಎಲ್ಲಾ ತಂಡಗಳಿಗೂ, ಗಾಯಕರಿಗೂ ವಂದನೆಗಳು.

ಒಟ್ಟಿನಲ್ಲಿ ಮದುವೆ ಮುಗಿಸಿಕೊಂಡು ಮನೆಗೆ ಬಂದ ನನಗೆ, ಎಲ್ಲಾ ನನ್ನ ಹೆಂಡತಿಗೆ ವಿವರಿಸಿದಾಗ ತಾನೂ ಮದುವೆಗೆ ಬರಬೇಕಿತ್ತೆಂದು ಈಗ ಹೇಳುತ್ತಿದ್ದಾಳೆ…
ನಮಸ್ಕಾರ,

ಇತಿ,

ವಲ್ಲೀಶ
(ಬೆಲ್ ಈಶ)

 Posted by at 10:17 AM
May 132013
 

Saturday, May 18, 2013

 

08:00 am – 09:30 am: REGISTRATION and BREAKFAST

 

8:00 – 09:30             Breakfast (Foyer) Registration (Lobby)

9:30                             First Bell/Announcement

9-35                             Second Bell/Announcement/Guests are escorted to the stage.

 

                                    09:40 am – 12:30 pm:  INAUGURAL SESSION

 

09:40 – 9:50                 Welcome Songs

Group Music by Texas Kannada Kootas

Coordinator:  Neela Chakravarthy

 

09:50 – 10:00               Welcome and Recognition of Invitees and Special Guests by HKV President Vatsa Kumar and KSR President M.S. Nataraja

 

10:00 – 10:05               Welcome by KSR Board of Trustees Chair H.Y. Rajagopal and Introduction of The Honorable Consul General of India

 

10:05 – 10:15               Inauguration of Conference- Lamp Lighting and Message of Good Wishes by The Honorable Parvathaneni Harish, Consul General of India

 

10:15 – 10:20              Introduction of Chief Guest Prof. K.V. Tirumalesh

H.Y. Rajagopal

 

10:20 – 10:50              Release of KSR Publication – ‘bEru sUru’

                                    Coordinators: Guru Prasad Kaginele, Triveni Shreenivasa Rao and Jyothi Mahadev (Editors) , Release – Prof. K.V. Tirumalesh

 

10:50 – 10:55              Introduction of Special Guest Prof. S.N. Sridhar : Jyothi Mahadev

 

10:55 – 11:10               Release of Raja Rao’s Kannada novel “naareegeeta”

Coordinators: Subby Subramayam, M.S. Nataraja and C.N. Srinath

Book Release: Prof. S.N. Sridhar

Remarks : Susan Raja Rao

 

11:10 – 11:15              Introduction of Special Guest Prof. Sripati Tantri : Triveni Shreenivasa Rao

 

11:15 – 11-25               Other Books Received for Release

Coordinators: Jyothi Mahadev  and Triveni Shreenivasa Rao

Book Release: Prof. Tantri

1. ‘Aha’ – (amerikannaDa haasya) –  Bala V. Manyam

2. ‘bhaaSheyiMda bhaaShege’ (Selected English poems in Kannada) – M.S. Nataraja

3. ‘Beyond Words’ (Selected Kannada poems in English) – M.S. Nataraja

 

11:25 – 11:30               Remembering HKV Bhagavata project and presentation of complimentary copies to the Chief and Special Guests Holalkere Chandrashekhar

 

11:30 – 12:30 pm        Keynote Address by Prof. K.V. Tirumalesh on ‘Development of Kannada – Challenges and Opportunities’

12:30 pm – 01:30 pm: MYSORE LUNCH

                                    01:30 pm – 04:30 pm: LITERARY SESSION – I


01:30 – 03:00               sAhitya gOShThi (Literary Seminar)

Conducted by Nalini Maiya (KSR) and Nataraja Kallur (HKV)

 

Participants: Mohan Ram (poem), Jyothi Mahadev (poem), Purnima    Subramanya (poem), P.S. Maiya (essay),  Triveni Shreenivasa Rao (poem),                                        Srivatsa Kundalgarki (poem), Naga Aithal (poem), Vaishali Hegde (essay),    Vallisha Shastry (essay), Nalini Maiya (poem), Vimala Rajagopal (essay),                                        and H.V. Rangachar (poem – Recorded)

03:00 – 03:15                oMdu iMdina dina

(Kannada translation of Richard Blanco’s poem read on Obama’s second inaugural ceremony) M.S. Nataraja

 

03:15 – 04:00               ‘nirvaaNa’ Drama Reading  (Adaptation  of Vivek Shanabhag’s Story by  Guruprasad Kaginele) Coordinators: Guruprasad Kaginele and Meera, P.R.

Participants: Guruprasad Kaginele, Vallisha Shastri, Ram Mohan, Meera   P.R.

 

04:00 – 04:20               Slide Show –“A Decade in Pages” – Ten years of KSR

Presented by Vallish Shastry and H.Y. Rajagopal

04:20 – 04:30               Announcements

Book sales – Sweta Jagadeesh

Banquet – Nataraja Rao

 

04:30 pm – 05:30 pm: BREAK – COFFEE, TEA AND SNACKS (FOYER)

VISIT TO BOOK STORE/EXHIBITION/ SALES (LOBBY)

Please encourage our authors by buying their books!

 

                                    05:30 pm – 08:00 pm: CULTURAL PROGRAM BY TEXAS KANNADIGAS  Presented by Mangala Prasad

                                    Invocatory Dance by Indrani Parthasarathy and Troupe

‘Hamsa’ – Based on the Ballet ‘SwanLake’ with Narration in Kannada

Produced by:  Dr. Rajam Ramamurthy, San Antonio

Kannada Yakshagana – “Shamantakopaakhyaana’         Presented by “Yakshagana Kalavrinda – USA”

“Swaatantrya Purvottara” – Choreographed and Directed by Rashmi   Shashi, with participants from Houston, Dallas and Austin    Kannada Kootas

 

08:00 pm – 10:00 pm Banquet at the Grand Hall in the Student Center

 Sunday, May 19, 2013 

08:00 am – 09:00 am Karnataka Breakfast (Lobby) and Group Photo of HKV and KSR Committee Members

09:00 – 09:10               Kannada GeetegaLu

Rajeshwari Bhat and Students

09:10 – 09:15               Announcements 

                                         09:15 am – 11:15 am: LITERARY SESSION II

09:15 – 10:30               namma hemmeya barahagAraru (‘Writers  We are Proud of’)

Presented by: Meera P.R. and Guruprasad Kaginele

Naga Aithal – ‘talemaarina sele’ (novel) – Guruprasaad Kaginele

H.Y. Rajagopal – ‘gaaMdhiyugakke kannadi’ – Meera R. R.

M.S. Nataraja –  ‘bhaasheyiMda bhaaShege’ (Selected English poems in   Kannada) and ‘Beyond Words’ ( Selected Kannada poems in English) –                                        Triveni shreenivasa Rao

Bala V. Manyam ‘Aha’ (collection of humorous writings) – Meera P.R.

Krisnaraju Tonse – Stories and Novel – Guruprasad Kaginele

Jyothi Mahadev – “bhaava lOka’ (collection of stories and essays) and      ‘bhaava yaana’ (collection of poems) – Meera P.R.

Triveni Shreenivasa Rao – ‘tiLi neeli pennu’ (collection of poems) –    Guruprasad Kaginele

Vaishali Hegde – ‘odde hima, uppu gaaLi’ (collection of columns) – Meera     P.R.

10:30 – 11:15               Tribute to Raja Rao

                                    Presented by Subby Subramanyam and Samhita Prasannamurthy 

Raja Rao’s Contribution to World Literature

Samhita Prasannamurthy, RiceUniversity ‘naareegeeta’ Re-creation Overview M.S. Nataraja, ‘naareegeeta’ Translation from ‘Song of Woman’ Manuscript, Challenges Faced C.N. Srinath,  ‘naareegeeta,’ the novel Prof. S.N. Sridhar, Common Themes of ‘nareegeeta,’ ‘Kanthapura’ and ‘Serpent and the Rope’ Sim Murthy

Closing (Samhita/Subby)

 

11:15 am – 11:30 am:             COFFEE BREAK

 

                                    11:30 am – 12:30 pm:             LITERARY SESSION III

 

saMvAda – Q &A Session with Prof. Tirumalesh, Prof. S.N. Sridhar, and Prof. Tantri , Moderator: Vallish Shastry

 

12:30 pm – 01:30 pm: Lunch Break (Tex-Mex Lunch)

 

                                    1:30 pm – 02:45 pm: LITERARY SESSION IV

 

01:30 – 02:15              paScima karAvaLiya BAshegaLu mattu saMskRuti (Languages and    Culture of West Coast of Karnataka)

Lecture by Special Guest, Prof. Tantri

Presented by:  H.Y. Rajagopal

02:15 – 3:00                “kannaDa kali” – Discussion and performance by: Texas Kannada    students and organizers

Presentation of gifts (books) to Kannada students

Conducted by: Nataraja Kallur

 

                                    3:00 pm – 03:45 pm: CLOSING SESSION

                                    Coordinator: Vatsa Kumar

 

Recognition of Artists (Paintings) Rashmi Murthy

Closing Remarks by Chairs of Texas Kannada Kootas

Recognition of Volunteers and Closing Remarks : Vatsa Kumar

 

Closing Remarks and Vote of Thanks : M.S. Nataraja

‘naaDageete’ Songs Rendered by: Participants from Texas Kannada Kootas

Coordinator: Neela Chakravarthy)

 

03:30 pm COFFEE & SNACKS, LEAVE TAKING 

(Note: Program may be subject to minor modifications.)

 PDF – KSR_Brocure_May18_19_2013_Prog-English

 

 

 Posted by at 12:42 PM