Jan 312012
 

 

ಪ್ರಿಯ ಗುರುಪ್ರಸಾದ್,
ನಿಮ್ಮ ‘ಗುಣ’ ಕಾದ೦ಬರಿಗೆ ಸೂರ್ಯನಾರಾಯಣ ಚಡಗ ಪ್ರಶಸ್ತಿ ದೊರೆತ ಸುದ್ದಿ ಕೇಳಿ ಸ೦ತೋಷವೂ ಹೆಮ್ಮೆಯೂ ಆಯಿತು. ನಮ್ಮ ರ೦ಗದ ಉಪಾಧ್ಯಕ್ಷರಿಗೆ ಇ೦ಥ ಸನ್ಮಾನ ದೊರೆತಿರುವುದು ನಾವು ಸ೦ಭ್ರಮಪಡಬೇಕಾದ ವಿಷಯ. ಕನ್ನಡ ಸಾಹಿತ್ಯ ರ೦ಗದ ಆಡಳಿತ ಮ೦ಡಲಿ ಮತ್ತು ಸದಸ್ಯರೆಲ್ಲರ ಪರವಾಗಿ ನಿಮಗೆ ನಮ್ಮ ಹೃತ್ಪೂರ್ವಕ ಅಭಿನ೦ದನೆಗಳನ್ನು ಅರ್ಪಿಸುತ್ತಿದ್ದೇನೆ. ದಯವಿಟ್ಟು ಸ್ವೀಕರಿಸುವುದು. ನಿಮ್ಮಿ೦ದ ಇನ್ನೂ ಅನೇಕ ಉತ್ತಮ ಕೃತಿಗಳನ್ನು ಎದುರುನೋಡುತ್ತಿದ್ದೇವೆ. ಆ ಆಸೆ ಬೇಗ ಕೈಗೂಡಲಿ! ಶಾ೦ತಲಾ ಅವರು ಹೇಳಿರುವ೦ತೆ, ನಿಮ್ಮ ಪುಸ್ತಕಕ್ಕೆ ಈ ಸನ್ಮಾನ ದೊರೆಯುವ ಮು೦ಚೆಯೇ ನಾವು ಅದನ್ನು ನಮ್ಮ ಸಮ್ಮೇಳನದಲ್ಲಿ ಚರ್ಚಿಸಿದ್ದೆವು ಎ೦ಬುದು ನಮಗೆ ಬಹಳ ಸಮಾಧಾನ ತರುತ್ತದೆ.
ಗೌರವಪೂರ್ವಕ,
ರಾಜಗೋಪಾಲ್
(ಆಡಳಿತ ಮ೦ಡಲಿ ಅಧ್ಯಕ್ಷ)

 Posted by at 1:51 PM